ಶ್ರೀಲಂಕಾದಲ್ಲಿ ನಡೆಯುತ್ತಿರುವುದೇನು!

0
1731

@ ಉಣ್ಣಿ ಕೆ.

ಭಾರತ ಜಗತ್ತಿಗೆ ನೀಡಿದ ಮಹಾನ್ ಕೊಡುಗೆಗಳಲ್ಲಿ ಕರುಣೆ, ಶಾಂತಿ, ಅಹಿಂಸೆಯಾಧಾರಿತ ಮೌಲ್ಯ ಸಂಕಲ್ಪಗಳನ್ನು ಹೊಂದಿರುವ ಬೌದ್ಧ ದರ್ಶನವೂ ಒಂದು. ಆದ್ದರಿಂದ ಆಕ್ರಮೋತ್ಸುಕ ಧರ್ಮದೇಶದ ಕೆಟಗರಿಯಲ್ಲಿ ಬೌದ್ಧಧರ್ಮವನ್ನು ತಂದು ನಿಲ್ಲಿಸುವುದು ಸಾಧ್ಯವಿಲ್ಲ. ಬುದ್ಧ ನಿಂದ ದಲೈಲಾಮ ವರೆಗೆ ಅನೇಕ ಬುದ್ಧ ಸನ್ಯಾಸಿಗಳ ಪರಂಪರೆಯಲ್ಲಿ ಮುಖ್ಯ ಧಾರೆಯ ಬೌದ್ಧ ಧರ್ಮ ಇದನ್ನೇ ಸಾಬೀತುಗೊಳಿಸಿದೆ. ಆದರೆ 20ನೆ ಶತಮಾನದಲ್ಲಿ ಹಲವು ದೇಶಗಳು ಸಂಘರ್ಷ ಭರಿತವಾದವು. ಶ್ರೀಲಂಕ, ದಕ್ಷಿಣ ಥೈಲೆಂಡ್, ಮ್ಯಾನ್ಮಾರ್ ಇದಕ್ಕೆ ಉದಾಹರಣೆಯಾಗಿ ನೀಡಬಹುದಾಗಿದೆ. ಆಕ್ರಮಣ ಶೀಲ ಭೌದ್ಧ ರಾಷ್ಟ್ರೀಯತೆ, ತೀರಾ ದುರ್ಬಲವಾದ ಒಂದು ಜನಕೂಟವನ್ನು ಮ್ಯಾನ್ಮಾರ್‍ನಲ್ಲಿ ಹತ್ಯೆ ಮಾಡಲಾಯಿತು. ಶ್ರೀಲಂಕಾದಲ್ಲಿ ಈ ಬುದ್ಧ ರಾಷ್ಟ್ರೀಯತೆ ಮುಸ್ಲಿಮ್ ಸಮುದಾಯದ ವಿರುದ್ಧ ದಾಳಿಗಿಳಿದಿದೆ.

ಬೌದ್ಧ ರಾಷ್ಟ್ರೀಯವಾದದಲ್ಲಿ ಪರಧರ್ಮ ದ್ವೇಷವೂ ಕೈಜೋಡಿಸಿದ ಇನ್ನೊಂದು ಸ್ಥಳವಾಗಿ ಈಗ ಶ್ರೀಲಂಕ ಬದಲಾಗುತ್ತಿರುವುದು ಕಾಣಬಹು ದಾಗಿದೆ. ಸುದೀರ್ಘ ಜನಾಂಗೀಯ ಕಲಹದ ನೋವು ಮರೆಯುವ ಮೊದಲೇ ಶ್ರೀಲಂಕಾದ ಬೇರೆ ಬೇರೆ ಪ್ರದೇಶಗಳಲ್ಲಿ ಗಲಭೆಯು ¸ಸ್ಪೋಟಿಸ ತೊಡಗಿದೆ. ಶ್ರೀಲಂಕಾದ ನಗರಾಭಿವೃದ್ಧಿ-ಜಲ ಸಂಪನ್ಮೂಲನ ಸಚಿವ ಶ್ರೀಲಂಕನ್ ಮುಸ್ಲಿಂ ಕಾಂಗ್ರೆಸ್ಸಿನ ನಾಯಕ ರವೂಫ್ ಹಕೀಮ್‍ರ ಕ್ಷೇತ್ರ ಕೂಡಾ ಆಗಿರುವ ಕ್ಯಾಂಡಿ ಜಿಲ್ಲೆಯಲ್ಲಿ ಈಗ ಗಲಭೆ ತಾಂಡವಕ್ಕಿಳಿದಿದೆ. ಮುಸ್ಲಿಮರಿಗೂ ಸಿಂಹಳ ಜನಾಂಗೀಯರಾದ ಬುದ್ಧ ಧರ್ಮ ಅನುಯಾಯಿ ಗಳ ನಡುವೆ ಮಾರ್ಚ್‍ನಲ್ಲಿ ಗಲಭೆ ಆರಂಭ ವಾಯಿತು. ಬೌದ್ಧ ಧರ್ಮದ ಒಬ್ಬ ಚಾಲಕನ ಕೊಲೆಯ ನೆಪದಲ್ಲಿ ಗಲಭೆ ಆರಂಭವಾಯಿತು. ನಂತರ ಅದು ದೊಡ್ಡ ಕೋಮುಗಲಭೆ ರೂಪ ಪಡೆಯಿತು. ಗಲಭೆಯಲ್ಲಿ ಇಬ್ಬರು ಕೊಲೆಯಾದರು. ಹಲವಾರು ಮನೆಗಳಿಗೆ ಕೊಳ್ಳಿಯಿಡಲಾಯಿತು. ಅಂಗಡಿ ಮುಂಗಟ್ಟುಗಳನ್ನು ಉರಿಸಿ ಹಾಕಲಾ ಯಿತು. 24ರಷ್ಟು ಮುಸ್ಲಿಮರ ಆರಾಧಾನಾಲಯ ಗಳನ್ನು ನಾಶ ನಷ್ಟಕ್ಕೆ ಗುರಿ ಪಡಿಸಲಾಯಿತು.
2009ರಲ್ಲಿ ಕೊನೆಯಾದ ಆಂತರಿಕ ಯುದ್ಧದ ಬಳಿಕ ಶ್ರೀಲಂಕದಲ್ಲಿ ರೂಪುಗೊಂಡಿರುವ ಬೌದ್ಧ ರಾಷ್ಟ್ರೀಯತೆಯ ಪ್ರತಿಫಲ ಈ ಗಲಭೆ ಯಾಗಿದೆ. ಮುಸ್ಲಿಮರ ವಿರುದ್ಧ ತೀವ್ರತೆರನ ವಿಷಕಾರುವ ಭಾಷಣಗಳನ್ನು ಮಾಡಲಾಯಿತು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‍ಗಳನ್ನು ಹಾಕಿ ಗಲಭೆ ಇನ್ನಷ್ಟು ಉರಿಯುವಂತೆ ನೋಡಿ ಕೊಂಡರು. ಬೋಧು ಬಾಲಸೇನ, ರಾವಣ ಬಾಲಯ ಮೊದಲಾದ ತೀವ್ರ ಬೌದ್ಧ ಸಂಘ ಟನೆಗಳು ಮತ್ತು ಅತೀ ತೀವ್ರವಾದ ಬುದ್ಧ ರಾಷ್ಟ್ರೀಯ ಪ್ರಚಾರಕರು ಇದರ ಹಿಂದೆ ಇದ್ದರೆ, ಬೋದು ಬಾಲಸೇನೆಯ ನಾಯಕ ಜಿ. ಜ್ಞಾನ ಸಂಸಾರ ಮುಂತಾದವರು ಶ್ರೀಲಂಕಾ ಬೌದ್ಧ ಸಿಂಹಳಿಯರದ್ದು ಮುಂತಾದ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇಂತಹ ಒಂದು ಅಪಪ್ರಚಾರ 2014ರಲ್ಲಿ ಅಂಬಾರಿಯಲ್ಲಿ, ಅಲ್ತುಗಾಮದಲ್ಲಿ, ಬೆರುವಾಲದಲ್ಲಿ ಗಲಭೆಗಳಿಗೆ ಕಾರಣವಾಗಿತ್ತು. ಬುದ್ಧ ಧರ್ಮದ ಅನುಯಾಯಿ ಗಳು ಸಿಂಹಳೀಯರನ್ನು ಶಂಡೀಕರಿಸುತ್ತಿದ್ದಾರೆ. ಆಹಾರ ವಸ್ತುಗಳಲ್ಲಿ ಮದ್ದು ಹಾಕುತ್ತಿದ್ದಾರೆ. ಅದನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆಯಿತು. ಇಲ್ಲಿನ ಹಲವಾರು ಮುಸ್ಲಿಮರ ವ್ಯಾಪಾರಿ ಕೇಂದ್ರಗಳನ್ನು ದೋಚಲಾಯಿತು. ನಾಶಪಡಿಸಲಾಯಿತು.

ಮುಸ್ಲಿಮ್ ವಿರೋಧಿ ಭಾವನೆ ಕೆರಳಿಸುವ ಕೆಲಸ ಕಳೆದ ಕೆಲವು ದಶಕಗಳಿಂದ ನಡೆಯುತ್ತಿದೆ. ಬುದ್ಧ ಧರ್ಮ ಅನುಯಾಯಿಗಳಾದ ಸಿಂಹಳ ವಿಭಾಗದ ವರ ನಡುವೆ ಇದು ಬೆಳೆದು ಗಟ್ಟಿಯಾಗಿದೆ. ಶ್ರೀಲಂಕವನ್ನು ಮುಸ್ಲಿಂ ಬಹು ಸಂಖ್ಯಾತ ರಾಷ್ಟ್ರವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ, ಸಿಂಹಳೀಯರನ್ನು ಶ್ರೀಲಂಕದಿಂದ ಹೊರ ದಬ್ಬುವ ಯತ್ನ ನಡೆಯುತ್ತಿದೆ ಎನ್ನುವ ದ್ವೇಷಪೂರಿತ ಅಪಪ್ರಚಾರ ತಾರಕಕ್ಕೇರಿದೆ. ಇದೇ ವೇಳೆ ಮುಸ್ಲಿಂ ಜನಸಂಖ್ಯೆಯಲ್ಲಿ ಆದ ಹೆಚ್ಚಳ ಸಿಂಹಳ ವಿಭಾಗದವರನ್ನು ಚಿಂತಾಕ್ರಾಂತರನ್ನಾಗಿ ಸುವ ರೀತಿಯಲ್ಲಿ ಈ ಪ್ರಚಾರದ ಧಾಟಿ ಸಾಗಿದೆ. ಶತಮಾನಗಳಿಂದ ಜೊತೆಗೆ ಬದುಕಿದ ಬುದ್ಧ ಅನುಯಾಯಿಗಳು ಮತ್ತು ಮುಸ್ಲಿಮರ ನಡುವೆ ಇದ್ದ ಧಾರ್ಮಿಕ ಸೌಹಾರ್ದದ ವಾತಾವರಣ, ವಿಶ್ವಾಸ ಕಳೆದ ಕೆಲವು ವರ್ಷಗಳಿಂದ ಮಾಯ ವಾಗಿದೆ. ಶಿಕ್ಷಣ ಸಂಸ್ಥೆಗಳು ಈ ದೂರಗೊಳಿಸುವಿಕೆ ತೀವ್ರತೆಯನ್ನು ತಂದುಕೊಟ್ಟವು. ಸಿಂಹಳ ಸ್ಕೂಲ್‍ಗಳು ಮತ್ತು ಮುಸ್ಲಿಮರ ಇಸ್ಲಾಮಿಕ್ ಸ್ಕೂಲ್‍ಗಳು ತಲೆ ಎತ್ತಿದುವು. ಹೀಗೆ ಶಿಕ್ಷಣದ ಮೂಲಕ ಧಾರ್ಮಿಕ ವಿಭಜನೆ ರಂಗೇರಿತು. ಬೇರೆ ಬೇರೆ ಧರ್ಮ ಸಂಸ್ಕøತಿಯಲ್ಲಿ ರೂಪು ಗೊಂಡಿದ್ದ ಸಾಮಾಜಿಕ ಸಹಯೋಗದ ಜೀವನ ವನ್ನು ಈ ವಿಭಜನೆ ಇಲ್ಲವಾಗಿಸಿತು. ಇದರಲ್ಲಿ ಎರಡು ವಿಭಾಗಗಳಲ್ಲಿರುವ ತೀವ್ರ ಚಿಂತನಾಗತಿ ಯವರು ಮತ್ತು ಸಂಘಟನೆಗಳ ದೊಡ್ಡ ಪಾತ್ರವಿದೆ.

1970ರಲ್ಲಿ ತಮಿಳು ರಾಷ್ಟ್ರವಾದದ ಪರಿಸ್ಥಿತಿ ಯಲ್ಲಿ ಸಿಂಹಳೀಯರು ಮತ್ತು ಮುಸ್ಲಿಮರು ಸೌಹಾರ್ದದಲ್ಲಿದ್ದರು. ಆಡಳಿತರಂಗ ಸಹಿತ ಎಲ್ಲದರಲ್ಲೂ ಪ್ರಾತಿನಿಧ್ಯ ದೊರಕಿತ್ತು. ಶಿಕ್ಷಣ ರಂಗ, ವ್ಯಾಪಾರಿ ಕ್ಷೇತ್ರದಲ್ಲಿ ಮುಸ್ಲಿಮ್ ಸಮು ದಾಯ ಬೆಳೆಯಿತು. ನಂತರ ಈ ಬೆಳವಣಿಗೆಯನ್ನು ಸಿಂಹಳೀಯರು ಬೇರೆಯೇ ರೀತಿಯಲ್ಲಿ ನೋಡ ತೊಡಗಿದರು. ಸಿಂಹಳೀಯರ ಬೌದ್ಧ ಜನರ ಧಾರ್ಮಿಕ ಆಚರಣೆಗಳಲ್ಲಿ ದೈನಂದಿನ ಜೀವನದಲ್ಲಿ ಮುಸ್ಲಿಮರಿಗೆ ನಿರ್ಣಾ ಯಕ ಸ್ಥಾನವಿತ್ತು. ತೀವ್ರ ಚಿಂತನಾಗತಿಯ ಸಂಘಟನೆಗಳ ಪ್ರಭಾವದಲ್ಲಿ ಇಂತಹ ವಾತಾವರಣ ಬದಲಾಯಿತು. ಪರಸ್ಪರ ಸಹಕಾರ ಕೊನೆಗೊಂಡು ಪರಸ್ಪರ ನಂಬಿಕೆ ಇಲ್ಲ ವಾಯಿತು. ಮುಸ್ಲಿಮರನ್ನು ಶ್ರೀಲಂಕದ ಹೊರಗಿನವ ರೆಂದು ಚಿತ್ರಿಸಲಾಯಿತು. ಉದ್ಯಮದಲ್ಲಿ ಮುಸ್ಲಿ ಮರು ಮುಂದಿರುವುದನ್ನು ಶಂಕೆಯಿಂದ ನೋಡುವ ಪರಿಸ್ಥಿತಿ ನೆಲೆಸಿತು. ಶ್ರೀಲಂಕದ ಕೊರಳು ಮುರಿಯುವ ಯಹೂದಿಯಾಗಿ ಶ್ರೀಲಂಕನ್ ಮುಸ್ಲಿಮರನ್ನು ಚಿತ್ರೀಕರಿಸಲಾಯಿತು.

ಇಂತಹ ಪರಿಸ್ಥಿತಿಯಲ್ಲಿ ಬೇರೆ ಬೇರೆ ಸಮುದಾಯಗಳ ನಡುವೆ ಅಗಲಿಕೆ ಹೆಚ್ಚಿತು. ಅಲ್ಪಸಂಖ್ಯಾತ ವಿಭಾಗಗಳನ್ನು ಪರ ಜನರು ಎನ್ನಲ್ಲಾಯಿತು. ಇಂತಹ ಪರಿಸ್ಥಿತಿಯಿಂದ ಲಾಭ ವೆತ್ತಿದ ದುಷ್ಕರ್ಮಿಗಳು ಗಲಭೆ ಸ್ಫೋಟಿಸಿದ್ದಾರೆ. ಬೌದ್ಧ ತೀವ್ರವಾದಿಗಳು ಮುಸ್ಲಿಮರನ್ನು ಬೇಟೆ ಯಾಡ ತೊಡಗಿದ್ದಾರೆ. ಸಮಾಜದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವಿನ ಜಗಳವೂ ಕೋಮುಗಲಭೆಯ ಸ್ವರೂಪಕ್ಕೆ ಹೋಗುತ್ತಿದೆ. ಇಂತಹ ಸಾಮಾಜಿಕ ಸಾಂಸ್ಕøತಿ ಮತ್ತು ರಾಜಕೀಯ ಘಟಕಗಳು ಶ್ರೀಲಂಕದಲ್ಲಿ ಮುಸ್ಲಿಂ ವಿರೋಧಿ ಮನೋಭಾವ ವಾಗಿ ಬದಲಾಯಿತು. ದೇಶದ ಸಾಮಾಜಿಕ ವೈವಿಧ್ಯತೆಯನ್ನು ಕಾಪಾಡುವ ಹೊಣೆಯು ಶ್ರೀಲಂಕನ್ ಬಹುಧರ್ಮೀಯರನ್ನು ಪ್ರತಿನಿಧಿಸುವ ಶ್ರೀಲಂಕನ್ ರಾಜಕೀಯ ಆಂದೋಲನಗಳ ಮುಂದಿದೆ