ಮಳಿಗೆಗೆ ಬೆಂಕಿ: ವೃತ್ತಿ ವೈಷಮ್ಯದಿಂದ ಬೆಂಕಿ ಹಚ್ಚಿರುವ ಶಂಕೆ

0
1240

ಮಂಗಳೂರು: ಇಲ್ಲಿನ ಬೀಬಿ ಅಲಾಬಿ ರಸ್ತೆಯಲ್ಲಿರುವ ಮೋಟಾರು ವಾಹನಗಳ ಹಳೆಯ ಬಿಡಿಬಾಗಗಳ ದಾಸ್ತಾನು ಮಳಿಗೆಗೆ ಶುಕ್ರವಾರ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿತ್ತು. .ಮಳಿಗೆಯ ಮಾಲಕ ಅಬ್ದುಲ್ ರಶೀದ್‍ ರು “ಇದು ಶಾರ್ಟ್ ಸಕ್ರ್ಯೂಟ್‍ನಿಂದ ಆದ ದುರಂತವಲ್ಲ. ಬದಲು ನಮಗೆ ಆಗದವರು ಯಾರೋ ಬೆಂಕಿ ಹಚ್ಚಿರಬಹುದು. ನಮಗೆ ಕಾರ್ಪರೇಶನ್‍ನವರಿಂದಲೂ ಒತ್ತಡವಿತ್ತು. ಬೆಳಗ್ಗೆ ನಮಾಜ್ ಮುಗಿಸಿ ಬಂದು ನೋಡಿದಾಗ ಹೊತ್ತಿ ಉರಿಯುತ್ತತ್ತು. ತಕ್ಷಣ ಅಗ್ನಿ ಶಾಮಕ ದಳಗಳಿಗೆ ಫೋನಾಯಿಸಿದಾಗ ಕೂಡಲೇ ಬಂದು ಬೆಂಕಿ ನಂದಿಸಲು ಶ್ರಮಿಸಿದರು. ಏಳೆಂಟು ಸಣ್ಣಪುಟ್ಟ ಅಂಗಡಿಗಳು ಸುಟ್ಟು ಭಸ್ಮವಾಗಿದೆ. ಹೀಗೆ ಏಳು ಜನರಿಗೆ ನಾಶ ನಷ್ಟವಾಗಿದೆ. ಅಲ್ಲದೆ ಪಕ್ಕದಲ್ಲಿ ಸುಮಾರು ಮೂವತ್ತು ಮಂದಿ ತಮ್ಮ ಮಾಲುಗಳನ್ನು ಅಲ್ಲಿ ದಾಸ್ತಾನು ಇಡುತ್ತಿದ್ದರು. ಇದರಿಂದ ಸುಮಾರು ಮೂವತ್ತೈದರಿಂದ ನಲುವತ್ತು ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದು ಹೇಳಿದ್ದಾರೆ. ಸರಕಾರದಿಂದ ನಮಗೆ ಯಾವುದೇ ಪರಿಹಾರ ಲಭಿಸಿಲ್ಲ. ಶಾಸಕ ಲೋಬೋರವರು ಭೇಟಿ ನೀಡಿದ್ದಾರೆ” ಎಂದಿರುವ ಅವರು, ಇಡೀ ಘಟನೆಯ ಬಗ್ಗೆ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.