ಮಗಳ ಮದುವೆ ಮುನ್ನಾ ದಿನ ಹಾಡುತ್ತಾ ಪ್ರಾಣ ಬಿಟ್ಟ ಎಸ್ಸೈ-ವೀಡಿಯೊ

0
558

ಚವರ (ಕೇರಳ) ಮೇ, 27: ಹಾಡುತ್ತಿದ್ದ ವೇಳೆ ಕುಸಿದು ಬಿದ್ದು ಎಸ್ಸೈ ಒಬ್ಬರು ಅಸುನೀಗಿದ್ದಾರೆ. ಮಗಳ ಮದುವೆಯ ಸ್ವಾಗತ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದ್ದ ಆರ್ಕೆಸ್ಟ್ರದಲ್ಲಿ ಸ್ವಯಂ ಹಾಡುಗಾರನಾಗಿದ್ದ ಕರಮನ ಠಾಣೆಯ ಎಸ್ಸೈ ವಿಷ್ಣುಪ್ರಸಾದ್(55) ಹಾಡಲು ಬಂದರು. ಹೀಗೆ ರಾಕಿಳಿ ಪೊನ್ಮಗಳೇ ಎಂಬ ಪ್ರಸಿದ್ಧ ಮಳೆಯಾಳಂ ಹಾಡು ಹಾಡುತ್ತಿದ್ದಂತೆ ವೇದಿಕೆಯಲ್ಲಿ ಕುಸಿದು ಬಿದ್ದರು.

ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆದು ಕೊಂಡು ಹೋದರೂ ಪ್ರಯೋಜನ ಆಗಲಿಲ್ಲ. ಅವರು ಮೃತಪಟ್ಟಿದ್ದಾರೆ. ಹತ್ತು ವರ್ಷ ಮೊದಲು ವಿಷ್ಣು ಪ್ರಸಾದ್‍ರಿಗೆ ಹೃದಯಾಘಾತ ಆಗಿತ್ತು. ನಂತರ ಯಾವುದೇ ಅಸೌಖ್ಯ ಅವರಿಗಿರಲಿಲ್ಲ. ಮದುವೆಯ ಎಲ್ಲ ಸಿದ್ಧತೆಗಳು ಮುಗಿಸಿಕೊಂಡು ಅವರು ಶನಿವಾರ ಘಟನೆ ನಡೆದಿದೆ. ಅವರ ಕಿರಿಯ ಮಗಳು ಅರ್ಚನಾಳ ಮದುವೆ ಪರಿಮಣಂ ದೇವಸ್ಥಾನದಲ್ಲಿ ರವಿವಾರ ನಡೆಯಿತು. ವಧುವಿಗೆ ತನ್ನ ತಂದೆ ನಿಧನರಾಗಿದ್ದನ್ನು ಯಾರೂ ತಿಳಿಸಿರಲಿಲ್ಲ. ಮದುವೆ ಕಾರ್ಯ ಮುಗಿದ ಬಳಿಕವೇ ತಿಳಿಸಲಾಗಿದೆ. ಇಂದು ಮೃತದೇಹ ಸಂಸ್ಕಾರ ನಡೆಯಲಿದೆ.