ನಾಳೆ ಕಸ್ಬಾ ಬೆಂಗರೆಯಲ್ಲಿ ರಕ್ತದಾನ ಶಿಬಿರ

0
1299

ಮಂಗಳೂರು: “ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ” ರಾಜ್ಯವ್ಯಾಪಿ ಸೀರತ್ ಅಭಿಯಾನದ ಅಂಗವಾಗಿ ನಾಳೆ (ಡಿ2) ಆದಿತ್ಯವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ರಕ್ತದಾನ ಶಿಬಿರವನ್ನು ಕಸ್ಬಾ ಬೆಂಗರೆಯ ಎ.ಆರ್.ಕೆ. ಶಾಲೆಯಲ್ಲಿ ಆಯೋಜಿಸಲಾಗಿದೆ. ಈ ರಕ್ತದಾನ ಶಿಬಿರವನ್ನು ಜಮಾಅತೆ ಇಸ್ಲಾಮೀ ಹಿಂದ್‍ನ ಸಮಾಜ ಸೇವಾ ಘಟಕವು ಆಯೋಜಿಸಿದ್ದು, ಶಿಬಿರದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಈರ್ವರಿಗೆ ಸನ್ಮಾನ, ಜೀವರಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತೋಟ ಬೆಂಗ್ರೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಜಯ ಸುವರ್ಣ, ಪ್ರಭಾಕರ್ ಕುದ್ರೋಳಿ ಬೆಂಗರೆ, ತೋಟ ಬೆಂಗರೆ ನೂರುಲ್ ಹುದಾ ಮದ್ರಸಾದ ಕಾರ್ಯದರ್ಶಿ ಅಬ್ದುಸ್ಸಮದ್ ಬೆಂಗರೆ, ವೆಲ್ಫೇರ್ ಪಾರ್ಟಿ ಬೆಂಗರೆ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಈಲ್ ಭಾಗವಹಿಸಲಿದ್ದಾರೆ. ಮಹಿಳೆಯರಿಗೂ ರಕ್ತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಾಟಕರು ವಿನಂತಿಸಿದ್ದಾರೆ.

ಸಾರ್ವಜನಿಕ ಸಭೆ: ಡಿಸೆಂಬರ್ 2 ಆದಿತ್ಯವಾರ ರಾತ್ರಿ 8 ಗಂಟೆಗೆ “ಪ್ರವಾದಿ ಮುಹಮ್ಮದ್(ಸ) ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ” ಎಂಬ ವಿಷಯದಲ್ಲಿ ಅನಸ್ ಬಿನ್ ಮಾಲಿಕ್ ಜುಮಾ ಮಸೀದಿಯ ಎದುರುಗಡೆ ಸಾರ್ವಜನಿಕ ಸಭೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕೇರಳದ ಮೌ| ಸಾಜಿದ್ ಪರಪ್ಪೂರ್, ಎ.ಆರ್.ಕೆ. ಶಾಲೆಯ ಅಧ್ಯಾಪಕ ಅಬ್ದುಲ್ಲತೀಫ್ ಆಲಿಯಾ ಭಾಗವಹಿಸಲಿದ್ದಾರೆ.