ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರ ವಿರುದ್ಧ ಪ್ರತಿಪಕ್ಷಗಳ ರ್ಯಾಲಿ ಬುಧವಾರ ದಿಲ್ಲಿಯಲ್ಲಿ ನಡೆಯಲಿದೆ. ಕೊಲ್ಕತಾದ ರ್ಯಾಲಿಯ ನಂತರ ದಿಲ್ಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಸರಕಾರ ರ್ಯಾಲಿ ಸಂಘಟಿಸುತ್ತಿದೆ. ‘ಸರ್ವಾಧಿಕಾರ ಕೊನೆಗೊಳ್ಳಬೇಕು. ದೇಶವನ್ನು ರಕ್ಷಿಸಿರಿ’ ಎಂಬ ಘೋಷಣೆಯೊಂದಿಗೆ ಜಂತರ್ಮಂತರ್ನಲ್ಲಿ ಮಹಾ ರ್ಯಾಲಿ ನಡೆಯಲಿದೆ.
ರ್ಯಾಲಿಯಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಮಂಗಳವಾರವೇ ದಿಲ್ಲಿಗೆ ಬಂದಿದ್ದಾರೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಸೋಮವಾರ ನಡೆದ ಧರಣಿಯಲ್ಲಿ ಭಾವಹಿಸಲು ಬಂದಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದಿಲ್ಲಿಯಲ್ಲಿದ್ದಾರೆ.
ಪ್ರಧಾನ ಪ್ರತಿಪಕ್ಷಗಳ ನಾಯಕರು ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಕಾಂಗ್ರೆಸ್ ತನ್ನ ನಿಲುವನ್ನು ಈವರೆಗೂ ವ್ಯಕ್ತಪಡಿಸಿಲ್ಲ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕೆಂದು ಆಗ್ರಹಿಸಿ ಚಂದ್ರ ಬಾಬು ರಾಷ್ಟ್ರಪತಿ ರಾಮನಾಥ್ ಕೋವಿಂದ್ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.