ಕಾಶ್ಮೀರ: ಮೂವರು ಭಯೋತ್ಪಾದಕರ ಹತ್ಯೆ

0
307

ಸನ್ಮಾರ್ಗ ವಾರ್ತೆ

ಶ್ರೀನಗರ,ಸೆ.17: ಕಾಶ್ಮೀರದ ಬಾತ್ಮಲು ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನೆಯು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಗುಂಡು ಹಾರಾಟದ ವೇಳೆ ಒಬ್ಬ ಸಿಆರ್‌ಪಿಎಫ್ ಯೋಧ ಗಾಯಗೊಂಡಿದ್ದಾನೆ.

ಭಯೋತ್ಪಾದಕರು ನುಸುಳಿಕೊಂಡಿದ್ದಾರೆ ಎಂಬ ವಿವರ ಲಭಿಸಿದ ನಂತರ ಗುರುವಾರ ಬೆಳಗ್ಗೆ ನಾಲ್ಕು ಗಂಟೆಗೆ ಸಿಆರ್‌ಪಿಎಫ್ ಪ್ರದೇಶವನ್ನು ಸುತ್ತುವರಿದಿತ್ತು. ಅಡಗಿಕೂತಿದ್ದ ಭಯೋತ್ಪಾದಕರೊಂದಿಗೆ ನಡೆದ ಘರ್ಷಣೆಯಲ್ಲಿ ಸೇನೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಗುಂಡುಹಾರಾಟದ ವೇಳೆ ಒಬ್ಬ ಗ್ರಾಮೀಣ ವ್ಯಕ್ತಿಯೂ ಹತನಾಗಿದ್ದಾನೆಂದು ವರದಿಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.