ಭೋಪಾಲ: ಕ್ರಿಕೆಟ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್‌ಗೆ ‘5 ಲೀ. ಪೆಟ್ರೋಲ್’ ಪುರಸ್ಕಾರ

0
674

ಸನ್ಮಾರ್ಗ ವಾರ್ತೆ

ಭೋಪಾಲ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಜನರಿಗಾದ ತೊಂದರೆಗಳನ್ನು ಗಮನಸೆಳೆಯುವ ರೀತಿಯಲ್ಲಿ ಕಳೆದ ವಾರ ಭೋಪಾಲದಲ್ಲಿ ನಡೆದ ಕ್ರಿಕೆಟ್ ಟೂರ್ನ್‍ಮೆಂಟ್ ಒಂದರ ಫೈನಲ್‍ನಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿಯಾಗಿ ಐದು ಲೀಟರ್ ಪೆಟ್ರೋಲ್ ನೀಡಿದ ಘಟನೆ ನಡೆದಿದೆ.

ಭೋಪಾಲದ ಕಾಂಗ್ರೆಸ್ ನಾಯಕ ಮನೋಜ್ ಶುಕ್ಲ ಟೂರ್ನ್‍ಮೆಂಟ್ ಆಡಿಸಿದ್ದರು. ರವಿವಾರ ನಡೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನನಾದ ಸಲಾಹುದ್ದೀನ್ ಅಬ್ಬಾಸಿ ಎಂಬವರಿಗೆ ಐದು ಲೀಟರ್ ಪೆಟ್ರೋಲನ್ನು ನೀಡಿ ಗೌರವಿಸಲಾದೆ.

ಜನವರಿ ಹದಿನಾರಂದು ತಮಿಳ್ನಾಡಿನ ಕರೂರ್ ಜಿಲ್ಲೆಯಲ್ಲಿ ಒಂದು ಪೆಟ್ರೋಲ್ ಬಂಕ್‍ನಲ್ಲಿ ಮಕ್ಕಳಿಗೆ ಉಚಿತವಾಗಿ ಒಂದು ಲೀಟರ್ ಪೆಟ್ರೊಲ್ ಘಟನೆ ಕೂಡ ನಡೆದಿದೆ. ಜನವರಿ 16ರಂದು ತಿರುವಳ್ಳುವರ್ ದಿನಾಚರಣೆಯ ಅಂಗವಾಗಿ ಈ ಕೊಡುಗೆ ನೀಡಲಾಗಿತ್ತು.

ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿದ ಸಮಯದಲ್ಲಿ ಪೆಟ್ರೋಲ್ ಬಂಕ್ ಮುಂದೆ ಕ್ರಿಕೆಟ್ ಬ್ಯಾಟ್ ಹೆಲ್ಮೆಟ್ ಮೇಲೆತ್ತಿ ಸೆಂಚುರಿ ಹೊಡೆದದ್ದಕ್ಕೆ ಸಂತೋಷ ಪ್ರಕಟಿಸಿದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ನಂತರ ಪೆಟ್ರೋಲ್ ಬಂಕ್ ಮಾಲಕರು ಮಕ್ಕಳಿಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ತಿರುಕೂರಿನಲ್ಲಿ ಉಡುಗೊರೆ ನೀಡಿದ್ದಾರೆ.