5 ವರ್ಷಗಳಲ್ಲಿ 3 ಏರ್‌ಸ್ಟ್ರೈಕ್‍ಗಳನ್ನು ಭಾರತ ನಡೆಸಿದೆ: ಮಂಗಳೂರಿನಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಹೇಳಿಕೆ

0
1160

ಮಂಗಳೂರು: ಗೃಹ ಸಚಿವ ರಾಜನಾಥ್ ಸಿಂಗ್ ಉರಿ ಭಯೋತ್ಪಾದನಾ ದಾಳಿಯ ನಂತರ ಸರ್ಜಿಕಲ್ ಸ್ಟ್ರೈಕ್‍ಗಳು ನಡೆದಿವೆ. ಪುಲ್ವಾಮ ಭಯೋತ್ಪಾದನಾ ದಾಳಿಯ ಬಳಿಕ ಪಾಕಿಸ್ತಾನಕ್ಕೆ ವಾಯು ದಾಳಿ ನಡೆಸಲಾಯಿತು ಎಂದು ಹೇಳಿದರು. ಆದರೆ ಮೂರನೆಯ ದಾಳಿಯ ವಿವರವನ್ನು ನೀಡಲಾಗಿಲ್ಲ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಗಡಿ ದಾಟಿ ಮೂರು ಸಲ ಯಶಸ್ವಿಯಾಗಿ ದಾಳಿ ಮಾಡಲಾಗಿದೆ. ಎರಡು ದಾಳಿಯ ವಿವರ ನೀಡಲಾಗಿದೆ ಅದರೆ ಮೂರನೆ ದಾಳಿಯ ವಿವರ ನೀಡಿಲ್ಲ. ಒಂದು ದಾಳಿ ಉರಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ನಮ್ಮ ದಾಳಿ ನಡೆದಾಗ ಮತ್ತು ಎರಡನೆಯದು ಪೂಲ್ವಾಮದ ಬಳಿಕ ಮತ್ತು ಮೂರನೆ ದಾಳಿಯನ್ನು  ನಡೆಸಲಾಗಿದೆ ಅದರೆ ಮೂರನೆಯ ದಾಳಿಯ ವಿವರವನ್ನು ಬಹಿರಂಗಪಡಿಸುವುದಿಲ್ಲ ಎಂದು ರಾಜನಾಥ್ ಸಿಂಗ್ ಮಂಗಳೂರಿನ ಸಭೆಯಲ್ಲಿ ಹೆಳಿದರು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಯುಎನ್‍ಐ ಶೇರ್ ಮಾಡಿದೆ.

ಭಾರತ ಎಂದೂ ದುರ್ಬಲವಾಗಿಲ್ಲ. ಫೆಬ್ರುವರಿ 26ಕ್ಕೆ ಪಾಕಿಸ್ತಾನದ ಬಾಲಕೋಟ್‍ಗೆ ಫೈಟರ್ ಜೆಟ್ ಮೂಲಕ ದಾಳಿ ಮಾಡಿತು. 1971ರಲ್ಲಿ ಮೊದಲ ಬಾರಿ ಭಾರತದ ಯುದ್ಧವಿಮಾನಗಳು ಪಾಕಿಸ್ತಾನದ ಗಡಿಯನ್ನು ದಾಟಿದ್ದವು ಎಂದು ಹೇಳಿದರು.