ಮಂಗಳೂರು: ಗೃಹ ಸಚಿವ ರಾಜನಾಥ್ ಸಿಂಗ್ ಉರಿ ಭಯೋತ್ಪಾದನಾ ದಾಳಿಯ ನಂತರ ಸರ್ಜಿಕಲ್ ಸ್ಟ್ರೈಕ್ಗಳು ನಡೆದಿವೆ. ಪುಲ್ವಾಮ ಭಯೋತ್ಪಾದನಾ ದಾಳಿಯ ಬಳಿಕ ಪಾಕಿಸ್ತಾನಕ್ಕೆ ವಾಯು ದಾಳಿ ನಡೆಸಲಾಯಿತು ಎಂದು ಹೇಳಿದರು. ಆದರೆ ಮೂರನೆಯ ದಾಳಿಯ ವಿವರವನ್ನು ನೀಡಲಾಗಿಲ್ಲ ಹೇಳಿದರು.
#WATCH Union Home Minister Rajnath Singh at a public rally in Mangaluru: Pichle 5 varsho mein, teen baar apni seema ke bahar jaa kar hum logon ne air strike kar kaamyaabi haasil ki hai. Do ki jaankari apko dunga, teesri ki nahi dunga. #Karnataka pic.twitter.com/NZKeJPulrS
— ANI (@ANI) March 9, 2019
ಕಳೆದ ಐದು ವರ್ಷಗಳಲ್ಲಿ ಗಡಿ ದಾಟಿ ಮೂರು ಸಲ ಯಶಸ್ವಿಯಾಗಿ ದಾಳಿ ಮಾಡಲಾಗಿದೆ. ಎರಡು ದಾಳಿಯ ವಿವರ ನೀಡಲಾಗಿದೆ ಅದರೆ ಮೂರನೆ ದಾಳಿಯ ವಿವರ ನೀಡಿಲ್ಲ. ಒಂದು ದಾಳಿ ಉರಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ನಮ್ಮ ದಾಳಿ ನಡೆದಾಗ ಮತ್ತು ಎರಡನೆಯದು ಪೂಲ್ವಾಮದ ಬಳಿಕ ಮತ್ತು ಮೂರನೆ ದಾಳಿಯನ್ನು ನಡೆಸಲಾಗಿದೆ ಅದರೆ ಮೂರನೆಯ ದಾಳಿಯ ವಿವರವನ್ನು ಬಹಿರಂಗಪಡಿಸುವುದಿಲ್ಲ ಎಂದು ರಾಜನಾಥ್ ಸಿಂಗ್ ಮಂಗಳೂರಿನ ಸಭೆಯಲ್ಲಿ ಹೆಳಿದರು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಯುಎನ್ಐ ಶೇರ್ ಮಾಡಿದೆ.
ಭಾರತ ಎಂದೂ ದುರ್ಬಲವಾಗಿಲ್ಲ. ಫೆಬ್ರುವರಿ 26ಕ್ಕೆ ಪಾಕಿಸ್ತಾನದ ಬಾಲಕೋಟ್ಗೆ ಫೈಟರ್ ಜೆಟ್ ಮೂಲಕ ದಾಳಿ ಮಾಡಿತು. 1971ರಲ್ಲಿ ಮೊದಲ ಬಾರಿ ಭಾರತದ ಯುದ್ಧವಿಮಾನಗಳು ಪಾಕಿಸ್ತಾನದ ಗಡಿಯನ್ನು ದಾಟಿದ್ದವು ಎಂದು ಹೇಳಿದರು.