ಜೆಡಿಎಸ್-ಕಾಂಗ್ರೆಸ್ ಸಖ್ಯ 14ರಲ್ಲಿ 12 ಸೀಟು ಜಯಿಸಲಿದೆ- ಕುಮಾರಸ್ವಾಮಿ

0
1406

ರಾಮನಗರ,ಎ.18: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಖ್ಯ 14ರಲ್ಲಿ 10ರಿಂದ 12 ಸೀಟು ಗಳಿಸಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಚುನಾವಣೆ ರೈತರ ಹಿತ ರಕ್ಷಣೆಯಲ್ಲಿ ನಿರ್ಣಾಯಕವಾಗಿದೆ. ಎಲ್ಲ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಬೇಕೆಂದು ಅವರು ಮನವಿ ಮಾಡಿದ್ದರು.

ಮತದಾರರ ತಿರ್ಮಾನ ಯಾವುದೇ ಆದರೂ ಅದು ದೇಶದ ಭವಿಷ್ಯವನ್ನು ನಿರ್ಣಯಿಸುತ್ತದೆ. ಆದ್ದರಿಂದ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಮತಚಲಾಯಿಸಿದ ಬಳಿಕ ಪತ್ರಕರ್ತರ ಜೊತೆ ಮಾತಾಡುತ್ತಾ ಹೇಳಿದರು. ಕುಟುಂಬ ರಾಜಕೀಯ ಈಗ ಒಂದು ದೊಡ್ಡ ವಿಷಯವಲ್ಲ. ದೇಶದ ಸಮಸ್ಯೆಗಳು ದೊಡ್ಡದು. ಕುಟುಂಬ ರಾಜಕೀಯದಿಂದ, ಪ್ರಾದೇಶಿಕ ರಾಜಕೀಯದಿಂದ ಅಭಿವೃದ್ಧಿಯಾಗಿದೆ. ಬಿಜೆಪಿಯ ಟೀಕೆಗಳಿಗೆ ಮಹತ್ವ ನೀಡುವುದಿಲ್ಲ ಎಂದು ಕುಮಾರ ಸ್ವಾಮಿ ಹೇಳಿದರು.