ಮಂಡ್ಯ ಕ್ಷೇತ್ರದಿಂದ ಸುಮಲತಾ ಸ್ವತಂತ್ರ ಸ್ಪರ್ಧೆ; ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ: ಕನ್ನಡ ಚಿತ್ರರಂಗದ ಬೆಂಬಲ

0
920

ಬೆಂಗಳೂರು,ಮಾ. 19: ಅಂಬರಿಷ್ ಬಿಟ್ಟು ಹೋದ ಕನಸುಗಳನ್ನು ಈಡೇರಿಸುವ ಉದ್ದೇಶದಿಂದ ನಿಮ್ಮೆಲ್ಲರ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದು ಸುಮಲತಾರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಟ ಯಶ್, ಪುತ್ರ ಅಭಿಶೇಕ್ ಗೌಡ, ಸುಮಲತಾರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮಂಡ್ಯ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು ಕನ್ನಡ ಚಿತ್ರರಂಗ ಕೂಡ ಸುಮಲತಾರನ್ನು ಬೆಂಬಲಿಸಲಿದೆ. ಇಪ್ಪತ್ತನೆಯ ತಾರೀಕಿಗೆ ಹತ್ತು ಗಂಟೆಗೆ ತಾನು ನಾಮಪತ್ರವನ್ನು ಸಲ್ಲಿಸುವೆ ಎಂದು ಸುಮಾಲತಾ ಹೇಳಿದರು. ತಾನು ಯಾರ ವೈಯಕ್ತಿಕ ವಿಚಾರವನ್ನು ಕೆದಕಿ ನೋವು ಉಂಟು ಮಾಡುವುದಿಲ್ಲ. ನನಗೆ ಧೈರ್ಯ ತುಂಬಲು ಜನರು ಜೊತೆಗಿದ್ದಾರೆ. ರಾಕ್‌ಲೈನ್ ವೆಂಕಟೇಶ್, ದರ್ಶನ್, ಸುದೀಪ್ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳಿದರು. ಕಾಂಗ್ರೆಸ್ ಮೂಲಕ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದ ಸುಮಲತಾರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಕಾಂಗ್ರೆಸ್, ಜೆಡಿಎಸ್ ಸಖ್ಯದ ಅಭ್ಯರ್ಥಿಯಾಗಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.