ಸನ್ಮಾರ್ಗ ವಾರ್ತೆ
ಹೈದರಾಬಾದ್,ಮೇ.26: ಕೊಲ್ಕತ್ತಾದಿಂದ ಬೆಂಗಳೂರಿಗೆ ಮರಳುತ್ತಿದ್ದ ವಲಸೆ ಕಾರ್ಮಿಕರನ್ನೊಳಗೊಂಡ ಬಸ್ ಪಲ್ಟಿಯಾಗಿದ್ದು ಹತ್ತು ಮಂದಿ ಗಾಯಗೊಂಡಿದ್ದಾರೆ. ಕೊಲ್ಕತ್ತಾದಿಂದ ಬಸ್ ಹೊರಟ ಬಸ್ಸು ಆಂಧ್ರಪ್ರದೇಶದವರೆಗೆ ತಲುಪಿತ್ತು.
ಆಂಧ್ರಪ್ರದೇಶದ ಶ್ರೀಖಾಕುಳಂ ಜಿಲ್ಲೆಯ ಸಮೀಪದ ಮಂದಾಸ ಎಂಬಲ್ಲಿ ಬಸ್ ಪಲ್ಟಿಯಾಗಿದೆ. ಕಾರ್ಮಿಕರು ಖಾಸಗಿ ಬಸ್ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಗಾಯಾಳು ಕಾರ್ಮಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.