ಕರ್ನಾಟಕ ಜೆಡಿಎಸ್ ನಾಯಕ ಅಪ್ಪಾಜಿ ಗೌಡ ನಿಧನ

0
417

ಸನ್ಮಾರ್ಗ ವಾರ್ತೆ

ಬೆಂಗಳೂರು,ಸೆ.3: ಮಾಜಿ ಶಾಸಕ ಮತ್ತು ಹಿರಿಯ ಜೆಡಿಎಸ್ ನಾಯಕ ಅಪ್ಪಾಜಿ ಗೌಡ(67) ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಸಿರಾಟಕ್ಕೆ ಸಂಬಂಧಿಸಿದ ಅಸೌಖ್ಯ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ನಡೆಸಿದ ಪರೀಕ್ಷೆಯಲ್ಲಿ ಅವರಿಗೆ ಕೊರೋನ ದೃಢಪಟ್ಟಿತ್ತು. ಹೃದ್ರೋಗಕ್ಕೂ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಶಿಮೊಗ್ಗದ ಭದ್ರಾವತಿ ವಿಧಾನಸಭಾ ಕ್ಷೇತ್ರವನ್ನು ಈ ಹಿಂದೆ ಅವರು ಪ್ರತಿನಿಧಿಸುತ್ತಿದ್ದರು. 1994ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ 2013ರಲ್ಲಿ ಅವರು ಜೆಡಿಎಸ್‍ಗೆ ಸೇರ್ಪಡೆಯಾಗಿದ್ದರು. ಅವರ ಪಾರ್ಥಿವ ಶರೀರದ ಸಂಸ್ಕಾರ ಕಾರ್ಯವು ಕೊರೋನ ನಿಬಂಧನೆಯಂತೆ ನಡೆಯಲಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.