ಸನ್ಮಾರ್ಗ ವಾರ್ತೆ
ಇಂಧೋರ್,ನ.17: ಮಧ್ಯಪ್ರದೇಶದಲ್ಲಿ ಆಯುಧಧಾರಿಗಳ ತಂಡ ಮಾಜಿ ಬಿಜೆಪಿ ಶಾಸಕ ಗೋಪಾಲಕೃಷ್ಣ ನೆಮರ ಮನೆಯಲ್ಲಿ ದಾಂಧಲೆಯೆಬ್ಬಿಸಿ ಪಿಠೋಪಕರಣಗಳನ್ನು ನಾಶಪಡಿಸಿದ್ದಾರೆ. ಬೈಕ್ನಲ್ಲಿ ಬಂಧ ಆಯುಧದಾರಿಗಳ ಒಂದು ತಂಡ ಹಿರಿಯ ಬಿಜೆಪಿ ನಾಯಕ ಗೋಪಾಲಕೃಷ್ಣ ನೆಮರ ಮನೆಗೆ ಬಂದು ಹಲ್ಲೆ ಮಾಡಿದ್ದಾರೆ. ಮನೆಯ ಸಮೀಪ ಇದ್ದ ವ್ಯಕ್ತಿಗೂ ಥಳಿಸಿದ್ದಾರೆ ಎಂದು ಎಎಸ್ಪಿ ರಾಜೇಶ್ ವ್ಯಾಸ್ ಹೇಳಿದರು.
ಫಯಾಝ್ ಅಹ್ಮದ್ ಎಂಬವರು ನೀಡಿದ ಮಾಹಿತಿಯ ಪ್ರಕಾರ ಕೆಲವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಸ್ಥಳೀಯ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದ ನಂತರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.
20 ಮಂದಿ ತಲವಾರು, ದಂಡಗಳನ್ನು ಹಿಡಿದ ಮನೆಯನ್ನು ಕೆಡವಲು ಬಂದರು ಎಂದು ಅಹ್ಮದ್ ಹೇಳಿದರು. ಹಲ್ಲೆಗೊಳಗಾದ ವ್ಯಕ್ತಿ ಯಾರೆಂದು ತನಗೆ ಗೊತ್ತಿಲ್ಲ. ದುಷ್ಕರ್ಮಿಗಳು ಬಂದ ಸಮಯದಲ್ಲಿ ನಾನು ಬಾಗಿಲು ಹಾಕಿ ಮನೆಮಂದಿಯೊಂದಿಗಿದ್ದೆ. ಅವರು ಮನೆಗೆ ಬಂದು ದಾಂಧಲೆ ಮಾಡಿದರು ಎಂದು ನೆಮರ ಮಾಧ್ಯಮ ವರದಿಗಾರರಿಗೆ ಘಟನೆಯನ್ನು ವಿವರಿಸಿದರು. ಕುಟುಂಬ ಸದಸ್ಯರು ಯಾರೂ ಗಾಯಗೊಡಿಲ್ಲ ಎಂದು ಅವರು ತಿಳಿಸಿದ್ದಾರೆ.