ದಲಿತ ಬಿಜೆಪಿ ಕಾರ್ಯಕರ್ತ, ಕುಟುಂಬಕ್ಕೆ RSS ನಿಂದ ಹಲ್ಲೆ-  ಆರೋಪ

0
728

ಸನ್ಮಾರ್ಗ ವಾರ್ತೆ

ಕೇರಳ,ಡಿ.29: ಪರಿಶಿಷ್ಟ ಜಾತಿ ಮೋರ್ಚದ ನಾಯಕ ಬಿಜೆಪಿ ಕಾರ್ಯಕರ್ತ ಕಡಕ್ಕರಪ್ಪಳ್ಳಿಯ ಸುಖ್‍ರಾಜ್ ಎಂಬವರ ಮನೆಗೆ ನುಗ್ಗಿ ಪತ್ನಿ, ತಾಯಿಗೆ ಹಲ್ಲೆ ಆರೆಸ್ಸೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಸುಖ್‍ರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಸುಖ್‍ರಾಜ್(45), ಪತ್ನಿ ಶ್ರೀಜಾ(35), ತಾಯಿ ರಾಧಾಮಣಿ(70)ಯವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಸಂಜೆ ಐದು ಗಂಟೆಗೆ ಸುಖ್‍ರಾಜ್‍ರ ಮನೆಗೆ ನುಗ್ಗಿದ ಆರೆಸ್ಸಿಗರಾದ ಅಜಿತ್, ಅಜಯ್ ಘೋಷ್ ಹಲ್ಲೆ ನಡೆಸಿದರೆಂದು ಸುಖ್‍ರಾಜ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಇವರ ವಿರುದ್ಧ ಪಟ್ಟಣಕ್ಕಾಡ್ ಪೊಲೀಸರು ಕೇಸು ದಾಖಲಿಸಿದ್ದಾರೆ.

ಚುನಾವಣೆಯ ವೇಳೆ ಸುಖ್‍ರಾಜ್ ಬಿಜೆಪಿಯಲ್ಲಿ ಸಂಘಟನಾ ವಿರೋಧಿ ಚಟುವಟಿಕೆ ಮಾಡಿದರೆಂದು ಸುಖ್‍ರಾಜ್ ಮತ್ತು ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನ್ನ ವಿರುದ್ಧ ಪಾರ್ಟಿಯಿಂದ ಹೊರ ಹಾಕಲಾಗಿದೆ ಎಂಬುದಾಗಿ ಅಪಪ್ರಚಾರವನ್ನು ಮಾಡಲಾಗಿತ್ತು. ದಲಿತ ವಿಭಾಗದವರನ್ನು ಪಾರ್ಟಿಯಿಂದ ಹೊರ ಹಾಕುವ ಶ್ರಮದ ಭಾಗವಾಗಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಖ್‍ರಾಜ್ ಹೇಳಿದ್ದಾರೆ.

ಆದರೆ, ಬಿಜೆಪಿ ಸುಖ್‍ರಾಜ್ ಆರೋಪವನ್ನು ತಳ್ಳಿಹಾಕಿದ್ದು ಇದು ವೈಯಕ್ತಿಕ ದ್ವೇಷದಿಂದ ನಡೆದ ಘಟನೆಯಾಗಿದ್ದು, ಇದರಲ್ಲಿ ತಮಗೊ, ಆರ್‌ಎಸ್ಎಸ್ನದ್ದೋ ಪಾತ್ರವಿಲ್ಲ ಎಂದು ಬಿಜೆಪಿಯ ಕಡಕ್ಕರಪ್ಪಳ್ಳಿ ಮಂಡಲ ಅಧ್ಯಕ್ಷ ಎಸ್.ಕಣ್ಣನ್ ಹೇಳಿದರು.