ದೀಪಕ್ಕೆ ಬದಲು ಗುಂಡು: ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಅಮಾನತು

0
893

ಸನ್ಮಾರ್ಗ ವಾರ್ತೆ

ಬಲರಾಮಪುರ, ಎ. 7: ಒಗ್ಗಟ್ಟಿನ ದೀಪಕ್ಕೆ ಬೆಂಬಲ ಸೂಚಕವಾಗಿ ಆಕಾಶಕ್ಕೆ ಗುಂಡು ಹಾರಿಸಿದ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಉತ್ತರ ಪ್ರದೇಶ ಬಲರಾಮಪುರ ವಿಭಾಗದ ಅಧ್ಯಕ್ಷೆ ಮಂಜು ತಿವಾರಿಯನ್ನು ಅಮಾನತುಗೊಳಿಸಲಾಗಿದೆ. ಪಾರ್ಟಿಯ ಶಿಸ್ತು ಉಲ್ಲಂಘಿಸಿದಕ್ಕಾಗಿ ಮಂಜು ತಿವಾರಿಯವರ ಅಮಾನತಾಗಿದೆ ಎಂದು ಪಾರ್ಟಿಯ ಮೂಲಗಳು ತಿಳಿಸಿವೆ. ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪ ಉರಿಸಿ ಒಗ್ಗಟ್ಟು ಪ್ರದರ್ಶಿಸಲು ಹೇಳಿದ್ದರು. ಇದನ್ನು ಬೆಂಬಲಿಸಿ ಮಂಜು ತಿವಾರಿ ಆಕಾಶಕ್ಕೆ ಗುಂಡು ಹಾರಿಸಿದ್ದು ಈ ಸಂದರ್ಭದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಬಲರಾಮಪುರ ಪೊಲೀಸರು ಮಂಜು ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅಪಾಯಕಾರಿ ವಸ್ತು ಕೈಯಲ್ಲಿಟ್ಟುಕೊಂಡದ್ದಕ್ಕಾಗಿರುವ 1959ರ ಆಯುಧ ಕಾನೂನಿನ ಸೆಕ್ಷನ್ 30 ರ ಪ್ರಕಾರ ಮಹಿಳೆ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.