ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 4675; ಸಾವಿಗೀಡಾದವರ ಸಂಖ್ಯೆ 142

0
423

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 7:ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು 4675 ಮಂದಿಗೆ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 142 ಮಂದಿ ಮೃತಪಟ್ಟಿದ್ದಾರೆ. ತಮಿಳ್ನಾಡು, ಮಹಾರಾಷ್ಟ್ರದಲ್ಲಿ ವೈರಸ್‍ಗೆ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯ ಲೆಕ್ಕ ಪ್ರಕಾರ ಕಳೆದ 24 ಗಂಟೆಗಳಲ್ಲಿ 704 ಮಂದಿಯಲ್ಲಿ ರೋಗ ದೃಢಪಟ್ಟಿದೆ ಎಂದು ಸೋಮವಾರ ಸಂಜೆ ತಿಳಿಸಲಾಗಿತ್ತು. ಇದಲ್ಲದೆ ಕಳೆದ ದಿವಸ 24 ಮಂದಿ ಮೃತಪಟ್ಟಿರುವುದು ಕೂಡ ವರದಿಯಾಗಿತ್ತು. ಕೊರೊನಾ ಪೀಡಿತರ ಸಂಖ್ಯೆಯ ಹೆಚ್ಚಳದಲ್ಲಿ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಸೋಮವಾರ 318 ಮಂದಿ ಕೊರೊನಾ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು.

ಐಸಿಎಂ ಆರ್ ಲೆಕ್ಕ ಪ್ರಕಾರ ಸೋಮವಾರ ರಾತ್ರೆ ಒಂಬತ್ತು ಗಂಟೆಯವರೆಗೆ 1,01,068 ಸ್ಯಾಂಪಲ್ ಪರೀಕ್ಷೆ ನಡೆಯಿತು. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ರೋಗ ಪೀಡಿತರನ್ನು ಗುರುತಿಸಲಾಗಿದೆ. ಆಂಧ್ರ, ತಮಿಳ್ನಾಡು, ಪಂಜಾಬ್ ಗುಜರಾತ್, ಉತ್ತರಪ್ರದೇಶಗಳಲ್ಲಿ ನಿನ್ನೆ ಸಾವು ಸಂಭವಿಸಿದ ಘಟನೆ ವರದಿಯಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.