ಚೂರಿ ಇರಿತಕ್ಕೊಳಗಾದ ದೀಕ್ಷಾಳ ಆರೋಗ್ಯದಲ್ಲಿ ಚೇತರಿಕೆ: ಸುಶಾಂತ್ ನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲು ತಯಾರಿ

0
1729

ಕೊಣಾಜೆ: ಭಗ್ನಪ್ರೇಮಿ ಸುಶಾಂತ್ ನಿಂದ ಚೂರಿ ಇರಿತಕ್ಕೊಳಗಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿರುವ ದೀಕ್ಷಾ ರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ವರದಿಗಳು ತಿಳಿಸಿವೆ. ಬಗಂಬಿಲದ ನಿವಾಸಿ ದೀಕ್ಷಾಳ ಮೇಲೆ ಸುಶಾಂತ್ ಕಳೆದವಾರ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ್ದನು.

ದೀಕ್ಷಾ ಕೈಕಾಲುಗಳನ್ನು ಅಲ್ಲಾಡಿಸಿದ್ದಾಳೆ’ ಎನ್ನುವ ವರದಿ ಭಾನುವಾರದಂದು ಬಂದಿದ್ದು, ಏಳು ಮಂದಿಯ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

ಅಲ್ಲದೆ, ವಿದ್ಯಾರ್ಥಿನಿಗೆ ಚೂರಿಯಿಂದ ಇರಿದದ್ದಲ್ಲದೆ, ತಾನೂ ಕತ್ತು ಸೀಳಿಕೊಂಡುಆತ್ಮಹತ್ಯೆಗೆ ಯತ್ನಿಸಿದ ಸುಶಾಂತ್ ನನ್ನು ದೇರಳಕಟ್ಟೆ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗಕ್ಕೆ ಸೇರಿಸಲಾಗಿದ್ದು, ಪೊಲೀಸ್ ಬಂದೋಬಸ್ತಿನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಒಂದೆರಡು ದಿನಗಳಲ್ಲಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಬಳಿಕ ಪೊಲೀಸ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಪ್ರಕ್ರಿಯೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.