ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.4: ದಿಲ್ಲಿಯಲ್ಲಿ ನಡೆದ ಕೋಮು ಗಲಭೆಯ ಆರೋಪಿಗಳಾದ 16 ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ದಾಳಿಗೆ ಒಳಗಾಗಿದ್ದ ಪರ್ವೇಶ್ ಎಂಬವರು ಮಾರ್ಚ್ 19ಕ್ಕೆ ನೀಡಿದ ದೂರಿನಡಿಯಲ್ಲಿ ಭಜನ್ಪುರ ಪೊಲೀಸರು ಒಂದು ವಾರದೊಳಗೆ ಬಂಧಿಸಿದರು.
ಪರ್ವೇಶ್ರ ತಂದೆ ದಾಳಿಯಲ್ಲಿ ಕೊಲೆಯಾಗಿದ್ದರು. ಫೆಬ್ರುವರಿ 24ರಂದು ಮಧ್ಯಾಹ್ನ ಪೆಟ್ರೋಲ್ ಬಾಂಬ್, ಬಂದೂಕ್, ತಲವಾರು, ಕಬ್ಬಿಣದ ರಾಡ್ಗಳು, ಲಾಠಿಯೊಂದಿಗೆ ಬಂದ ಒಂದು ತಂಡ ಕಪಿಲ್ ಮಿಶ್ರಾ ಜಿಂದಾಬಾದ್ ಮುಲ್ಲಾ ಮುರ್ದಾಬಾದ್, ಗೋಲಿ ಮಾರೋ ಘೋಷಣೆಯನ್ನು ಮೊಳಗಿಸಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಿ ಕ್ವಿಂಟ್ ತನ್ನ ತನಿಖೆಯಲ್ಲಿ ಬಂಧಿತ ಎಲ್ಲ ಹದಿನಾರು ಮಂದಿಯೂ ಆರ್ಎಸ್ಎಸಿಗರು ಎಂದು ವರದಿ ಮಾಡಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.