ಸನ್ಮಾರ್ಗ ವಾರ್ತೆ
ಕೊಲ್ಕತಾ, ಜ. 20: ಐವತ್ತು ಲಕ್ಷ ಮುಸ್ಲಿಂ ವಲಸೆಗಾರರನ್ನು ಪತ್ತೆಹಚ್ಚಿ ಇವರನ್ನು ದೇಶದಿಂದ ಹೊರಗಟ್ಟುತ್ತೇವೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದರು. ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಸಿ ಉತ್ತರ 24 ಪರಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ದಿಲೀಪ್ ಘೋಷ್ ಹೀಗೆ ಬೆದರಿಕೆ ಹಾಕಿ ಭಾಷಣ ಮಾಡಿದರು.
ವಲಸಿಗರ ಹೆಸರನ್ನು ಮೊದಲು ಮತದಾರರ ಪಟ್ಟಿಯಿಂದ ತೆರವುಗೊಳಿಸಲಾಗುವುದು ಎಂದು ದಿಲೀಪ್ ಘೋಷ್ ಹೇಳಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಯಾರನ್ನು ಓಲೈಸುತ್ತಿದ್ದಾರೆ ಎಂದು ಅವರು ವಿವರಿಸಿದರು. ದಿಲೀಪ್ ಘೋಷ್ ಕೆಲವು ದಿವಸಗಳ ಹಿಂದೆ ನೀಡಿದ್ದ ಹೇಳಿಕೆ ವಿವಾದವಾಗಿತ್ತು. ಸಾರ್ವಜನಿಕ ಆಸ್ತಿ ನಾಶ ಪಡುವವರನ್ನು ನಾಯಿಗಳಂತೆ ಗುಂಡು ಹಾರಿಸಿ ಕೊಲ್ಲುತ್ತೇವೆ ಎಂದು ಘೋಷ್ ಹೇಳಿದ್ದರು.