ಸಹೋದರಿಯ ಮದುವೆಗೆ ಸಿಗದ ರಜೆ: ಕರ್ನಾಟಕದ ಈ ಯುವ ವೈದ್ಯರ ತೀರ್ಮಾನ ಆಘಾತಕಾರಿ

0
591

ಚಂಡೀಗಡ, ಜೂ.15: ಸಹೋದರಿಯ ಮದುವೆಗೆ ಹೋಗಲು ರಜೆ ಲಭಿಸದ್ದರಿಂದ ಬೇಸತ್ತ ರೋಹಟಕ್‍ನ ಯುವ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹ್ಟಕ್‍ನ ಪೋಸ್ಟ್ ಗ್ರಾಜುವೇಟ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನ ಎಂಡಿ ವಿದ್ಯಾರ್ಥಿ ಓಂಕಾರ್ ಹಾಸ್ಟೆಲ್ ಕೋಣೇಯಲ್ಲಿ ನೇಣುಹಾಕಿಕೊಂಡು ಸಾವಿನ ಮೊರೆ ಹೋಗಿದ್ದಾರೆ. ಓಂಕಾರ್ ಕರ್ನಾಟಕದವರು. ತನ್ನ ಸಹೋದರಿಯ ಮದುವೆಗೆ ಹೋಗಲು ರಜೆ ಅರ್ಜಿ ಹಾಕಿದ್ದರು. ಆದರೆ, ಇಲಾಖೆಯ ಮುಖ್ಯಸ್ಥರು ರಜೆ ಮಂಜೂರು ಮಾಡದ್ದರಿಂದ ಗುರುವಾರ ರಾತ್ರೆ ಹಾಸ್ಟೆಲ್‍ನಲ್ಲಿ ಓಂಕಾರ್ ಆತ್ಮಹತ್ಯೆ ಮಾಡಿಕೊಂಡರು. ಸಾಯುವ ಮೊದಲು ಬರೆದಿರಿಸಿದ ಪತ್ರ ದೊರಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಪೊಲೀಸರು ಆತ್ಮಹತ್ಯೆಗೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ಓಂಕಾರ್ ಗೆ ರಜೆ ನಿರಾಕರಿಸಿದ ವೈದ್ಯಕೀಯ ಇಲಾಖೆ ಮುಖ್ಯಸ್ಥರನ್ನು ಬಂಧಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.