ಶಾಂತಿ, ಸಮಾನತೆ ಹಾಗೂ ಸೌಹಾರ್ದಪೂರ್ಣ ಬಾಳ್ವೆಯೇ ಈದ್ ಸಂದೇಶ: ಅಬ್ದುಸ್ಸಲಾಮ್.ಯು

0
583

ಸನ್ಮಾರ್ಗ ವಾರ್ತೆ

ಮಂಗಳೂರು,ಜು.31:ಕರಾವಳಿಯಾದ್ಯಂತ ಸರಳ ಸಂಭ್ರಮದೊಂದಿಗೆ ಬಕ್ರೀದಗ ಆಚರಿಸಲಾಗುತ್ತಿದ್ದು, ಎಲ್ಲರಿಗೂ ಈದ್ ಶುಭಾಶಯಗಳನ್ನು ಕೋರಿದ ಜಮಾಅತೆ ಇಸ್ಲಾಮೀ ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಮ್.ಯು‌ ರವರು ಈದ್ ಸಂದೇಶವನ್ನು ನೀಡಿದರು‌.

ಬಕ್ರೀದ್ ಹಬ್ಬದ ಮಹತ್ವ ಎಂದರೆ ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ(ಅ)ರವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ ಈ ಹಬ್ಬದ ವೈಶಿಷ್ಟ್ಯ. ಇದು ವಿಶ್ವಾಸಿಗಳ ಪ್ರವಿತ್ರ ಹಬ್ಬಗಳಲ್ಲಿ ಒಂದು. ಇದನ್ನು ತ್ಯಾಗ ಬಲಿದಾನದ ಹಬ್ಬ ಎಂದೂ ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಈ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.

ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ(ಅ), ಅವರ ಪುತ್ರ ಇಸ್ಮಾಯಿಲ್(ಅ) ತ್ಯಾಗ, ಬಲಿದಾನದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ.

ಶಾಂತಿ ಸಮಾನತೆಯಿಂದ ಸೌಹಾರ್ದದಿಂದ ಬಾಳಬೇಕೆಂದು ಈದ್ ಸಂದೇಶ ಸಾರುತ್ತದೆ ಪ್ರಸ್ತುತ ವಿಶ್ವಕ್ಕೆ ಅಂಟಿದ ಕೊರೋನ ಮಹಾಮಾರಿ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಅತ್ಯಂತ ಶ್ರದ್ಧೆಯಿಂದ ಸರಕಾರ ನೀಡಿದ ಎಲ್ಲಾ ಆರೋಗ್ಯ ಸೂಚನೆಗಳನ್ನು ಪಾಲಿಸಿ ಈದ್ ಆಚರಿಸಬೇಕು ಅನಗತ್ಯ ಗುಂಪು ಸೇರುವಿಕೆಯಾಗಲಿ ಸುತ್ತಾಡುವಿಕೆಯಾಗಲಿ ಸಲ್ಲದು ಎಂದು ಅವರು ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.