ಸನ್ಮಾರ್ಗ ವಾರ್ತೆ
ಚೆನ್ನೈ: ಆರೋಗ್ಯ ಕಾರಣದಿಂದ ರಾಜಕೀಯದಿಂದ ಹಿಂದಡಿಯಿಟ್ಟಿರುವ ತಮಿಳು ನಟ ರಜನೀಕಾಂತ್ ಕಾರ್ಯಕರ್ತರು ರಾಜೀನಾಮೆ ಕೊಟ್ಟು ಬೇರೆ ಪಾರ್ಟಿ ಸೇರಲು ಸ್ವತಂತ್ರರೆಂದು ಹೇಳಿದ್ದಾರೆ. ರಜನೀ ಮಕ್ಕಳ್ ಮನ್ರಂನ ಕೆಲವು ಸದಸ್ಯರು ರಾಜೀನಾಮೆ ಕೊಟ್ಟು ಡಿಎಂಕೆಗೆ ಸೇರ್ಪಡೆಯಾದ ನಂತರ ರಜನೀಕಾಂತ್ ಘೋಷಿಸಿದ್ದಾರೆ.
ಬೇರೆ ಪಾರ್ಟಿಗೆ ಸೇರಿದರೂ ನೀವು ರಜನೀ ಅಭಿಮಾನಿಗಳೆಂಬ ವಿಷಯವನ್ನು ಮರೆಯಬಾರದು. ಇದರೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಬಹುದು ಎಂಬ ವಾದವೂ ಸುಳ್ಳಾಗಿದೆ. ಸ್ವಂತ ಪಾರ್ಟಿ ಘೋಷಿಸುವುದರಿಂದ ಹಿಂದೆ ಸರಿದ ರಜನೀ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಿರೀಕ್ಷಿಸಿತ್ತು.
ಆರೋಗ್ಯ ಸಮಸ್ಯೆ ಇರುವುದರಿಂದ ಪಾರ್ಟಿ ಕಟ್ಟುವುದಿಲ್ಲ ಎಂದು ರಜನೀಕಾಂತ್ ಹೇಳಿದ್ದಾರೆ. ಇತ್ತೀಚೆಗೆ ಅವರು ರಕ್ತದೊತ್ತಡ ವೈಪರೀತ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತದನಂತರ ಪಕ್ಷ ಕಟ್ಟುವುದಿಲ್ಲ ಎಂದು ಘೋಷಿಸಿದ್ದರು.