ಸನ್ಮಾರ್ಗ ವಾರ್ತೆ-
ಕೇರಳ, ಡಿ.12: ಮನೆಯಿಲ್ಲದ ಸಹಪಾಠಿಯ ಕನಸು ಈಡೇರಲಿಕ್ಕಾಗಿ ಹೈರುನ್ ಹಿಬಾ ಒಂದು ಪವನ್ ಚಿನ್ನದ ಸರವನ್ನೇ ಕೊಟ್ಟಿದಾಳೆ. ಕೊಳತ್ತೂರ್ ನ್ಯಾಶನಲ್ ಹೈಯರ್ ಸೆಕಂಟರಿ ಸ್ಕೂಲ್ ವಿದ್ಯಾರ್ಥಿ ಅರುಣ್ ಪ್ರಕಾಶ್ಗೆ ಸಹಪಾಠಿಗಳು ಮತ್ತು ಊರವರು ಸೇರಿ ಮನೆ ಕಟ್ಟಿಸುತ್ತಿದ್ದಾರೆ.
ದೇಣಿಗೆ ಸಂಗ್ರಹಿಸಲು ಅಧ್ಯಾಪಕರು ವಿದ್ಯಾರ್ಥಿನಿಯರ ಬಳಿ ಹೋದಾಗ ಹೈರುನ್ ಹಿಬಾ ತನ್ನ ಆಭರಣವನ್ನು ತೆಗೆದುಕೊಟ್ಟಿದ್ದಾಳೆ. ಇದರಿಂದ ಅಧ್ಯಾಪಕ ವೃಂದದಿಂದ ಶ್ಲಾಘನೆ ವ್ಯಕ್ತವಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ವಿ ವಿ ಮುಹಮ್ಮದ್ ಹನೀಫ-ಹಸೀನಾ ದಂಪತಿಗಳ ಪುತ್ರಿಯಾಗಿದ್ದಾಳೆ ಈಕೆ. ಅರುಣ್ ಮನೆ ಟರ್ಪಾಲಿನದ್ದಾಗಿದೆ. ಕುಟುಂಬ ದೊಡ್ಡ ಸಂಕಷ್ಟ ಎದುರಿಸುತ್ತಿದೆ. ಅರುಣ್ ತಂದೆ ಐದು ವರ್ಷದಿಂದ ರೋಗಿಯಾಗಿದ್ದಾರೆ.ತಾಯಿ ತಾತ್ಕಾಲಿಕ ಕೆಲಸವೊಂದರಲ್ಲಿದ್ದಾರೆ. ಅರುಣ್ನ ತಮ್ಮ ಅರ್ಜುನ್ ಪ್ರಕಾಶ್ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.