ಕಾಂಗ್ರೆಸ್ಸಿನೊಂದಿಗೆ ಮೈತ್ರಿ; ಪಾರ್ಟಿ ತೊರೆದ ಶಿವಸೇನೆ ನಾಯಕ

0
637

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ನ. 28: ಕಾಂಗ್ರೆಸ್-ಎನ್‍ಸಿಪಿಯೊಂದಿಗೆ ಸಖ್ಯ ಮಾಡಿಕೊಂಡಿದ್ದನ್ನು ವಿರೋಧಿಸಿ ಶಿವಸೇನೆಯ ಯುವಸೇನೆ ನಾಯಕ ರಮೇಶ್ ಸೋಳಂಕಿ ಶಿವಸೇನೆಗೆ ರಾಜೀನಾಮೆ ನೀಡಿದ್ದಾರೆ. ಗುರುವಾರ ರಾತ್ರೆ ಅವರು ರಾಜೀನಾಮೆ ಸಲ್ಲಿಸಿದರು.ಅವರು ಮಹಾರಾಷ್ಟ್ರದ ಜನರ ಸೇವೆಗೆ ಅವಕಾಶ ಕೊಟ್ಟ ನಾಯಕ ಉದ್ಧವ್ ಠಾಕ್ರೆಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ನನ್ನ ಜ್ಞಾನ, ಆದರ್ಶ ಕಾಂಗ್ರೆಸ್‍ನೊಂದಿಗೆ ಜೊತೆಗೂಡಿ ಕೆಲಸಮಾಡಲು ಒಪ್ಪುವುದಿಲ್ಲ. ದ್ವಂದ್ವ ಮನಸಿನಲ್ಲಿ ಶಿವಸೇನೆಯೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ರಮೇಶ್ ಸೋಳಂಕಿ ತಿಳಿಸಿದರು. ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿವಾದಿಂದಾಗಿ ಶಿವಸೇನೆ, ಬಿಜೆಪಿ ಮೈತ್ರಿ ಮುರಿದು ಬಿದ್ದಿತ್ತು.