ದಿನೇಶ್ ತ್ರಿವೇದಿ ಬಿಜೆಪಿ ಸೇರಲು ಬಯಸಿದರೆ, ಅವರನ್ನು ನಾವು ಸ್ವಾಗತಿಸುತ್ತೇವೆ: ಕೈಲಾಶ್ ವಿಜಯವರ್ಗಿಯಾ

0
377
ಕೈಲಾಶ್ ವಿಜಯವರ್ಗಿಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಸನ್ಮಾರ್ಗ ವಾರ್ತೆ

ಕೋಲ್ಕತಾ: ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ದಿನೇಶ್ ತ್ರಿವೇದಿ ಅವರು ಶುಕ್ರವಾರ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ, ತ್ರಿವೇದಿ ಅವರು ಬಯಸಿದರೆ ಬಿಜೆಪಿ ಸೇರಬಹುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.

ದಿನೇಶ್ ತ್ರಿವೇದಿ

“ದಿನೇಶ್ ತ್ರಿವೇದಿ ಜೀ ಮಾತ್ರವಲ್ಲ, ಯಾರು ಪ್ರಾಮಾಣಿಕ ಕೆಲಸ ಮಾಡಲು ಬಯಸುತ್ತಾರೋ ಅವರು ತೃಣಮೂಲ ಕಾಂಗ್ರೆಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ. ತ್ರಿವೇದಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಲು ಬಯಸಿದರೆ ನಾವು ಅವರನ್ನು ಸ್ವಾಗತಿಸುತ್ತೇವೆ” ಎಂದು ವಿಜಯ ವರ್ಗಿಯಾ ಎಎನ್‌ಐಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಟಿಎಂಸಿ ನಾಯಕರ ಪಕ್ಷಾಂತರ ಪ್ರಕ್ರಿಯೆಯು ಭರದಿಂದ ಸಾಗುತ್ತಿದೆ.