ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.16: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂರನ್ನು ಎನ್ಫೋರ್ಸ್ಮೆಂಟ್ ಡೈರಕ್ಟರೇಟ್(ಇಡಿ)ನ ಮೂವರ ತಂಡ ವಿಚಾರಣೆ ನಡೆಸುತ್ತಿದೆ. ವಿಚಾರಣೆ ನಡೆಸುವ ತಂಡದಲ್ಲಿ ಮಹೇಶ್ ಗುಪ್ತ, ಸಂದೀಪ್ ತಪ್ಲಿಯಲ್,ಡೈನಿಕ್ ಜೈನ್ ಇದ್ದಾರೆ. ವಿಚಾರಣೆಯ ಮೊದಲು ಚಿದಂಬಂರಂ ಪತ್ನಿ ನಳಿನಿ ಪುತ್ರ ಕಾರ್ತಿ ಚಿದಂಬರಂ ಜೈಲು ವರಾಂಡಕ್ಕೆ ಬಂದಿದ್ದಾರೆ.
ವಿಶೇಷ ಕೋರ್ಟಿನ ಅನುಮತಿ ಮೇರೆಗೆ ವಿಚಾರಣೆ ನಡೆದಿದೆ. ಚಿಂದರಂರನ್ನು ಪ್ರಶ್ನಿಸುವುದು ಮತ್ತು ಅಗತ್ಯವಿದ್ದರೆ ಬಂಧಿಸುವುದಕ್ಕೂ ವಿಶೇಷ ಸಿಬಿಐ ಜಡ್ಜ್ ಅಜಯ್ ಕುಮಾರ್ ಕುಹಾರ್ ಇಡಿಗೆ ಅನುಮತಿ ನೀಡಿದ್ದಾರೆ. ಇದೇ ವೇಳೆ ವಿಚಾರಣೆ ಚಿದಂಬರಂರ ಅಂತಸ್ತು ಮತ್ತು ಖಾಸಗಿತನವನ್ನು ಗೌರವಿಸಿ ನಡೆಯಬೇಕೆಂದು ಕೋರ್ಟು ಸೂಚಿಸಿತು. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆಗಸ್ಟ್ 21ರಿಂದ ಚಿದಂಬರಂ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಸ್ಟಡಿ ಅವಧಿ ಈ ತಿಂಗಳು 17ಕ್ಕೆ ಮುಗಿಯುತ್ತಿದೆ.