ಅಥಾವುಲ್ಲಾ ಜೋಕಟ್ಟೆ ವಿರುದ್ಧ ಸ್ವಯಂ ಪ್ರೇರಿತ ದೂರು ಖಂಡನಾರ್ಹ: ಜಮಾಅತೆ ಇಸ್ಲಾಮೀ ಹಿಂದ್

0
1311

ಮಂಗಳೂರು: ಬಾಬರಿ ಮಸೀದಿ ದ್ವಂಸದ ಅನ್ಯಾಯದ ಕ್ರಮವನ್ನು ಪ್ರತಿಭಟಿಸುವ ಸಲುವಾಗಿ ಎಸ್ಡಿಪಿಐ ‘ಬಾಬರೀ ಮಸೀದಿ ಎಕ್ಸ್ ಪೋ’ ಆಯೋಜಿಸಿದ್ದಕ್ಕಾಗಿ ಪಕ್ಷದ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ವಿರುದ್ಧ ಪೋಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿದ್ದಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಅಧ್ಯಕ್ಷ ಮುಹಮ್ಮದ್ ಕುಂಞಿ ತೀವ್ರವಾಗಿ ಖಂಡಿಸಿದ್ದಾರೆ.

ಶಾಂತಿಯುತವಾಗಿ ನಡೆಯುತ್ತಿದ್ದ ಕಾರ್ಯಕ್ರಮದ ವಿರುದ್ಧ ವಿನಾಕಾರಣ ಕೇಸು ದಾಖಲಿಸಿರುವ ಪೋಲೀಸರ ಬಗ್ಗೆ ಸಂಶಯ ವ್ಯಕ್ತಪಡಿಸುವಂತಾಗಿದೆ. ಈ ಹಿಂದೆ ಕೆಲ ರಾಜಕಾರಣಿಗಳು ಪ್ರಚೋದನಕಾರಿ ಭಾಷಣ ಮಾಡಿ ಜಿಲ್ಲೆಯನ್ನು ಉರಿಸುತ್ತೇವೆಂದು ಬೆದರಿಕೆ ಹಾಕಿದಾಗ ಸ್ವಯಂ ಪ್ರೇರಿತ ಕೇಸು ದಾಖಲಿಸದ ಪೋಲೀಸರು ಈಗ ಏಕಾಏಕಿ ಕೇಸು ದಾಖಲಿಸಿರುವುದರ ಮರ್ಮವೇನು? ಎಂದು ಪ್ರಶ್ನಿಸಿದ ಅವರು, ಅಥಾವುಲ್ಲಾರವರ ಮೇಲೆ ದಾಖಲಿಸಿದ ಕೇಸನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.