ಸನ್ಮಾರ್ಗ ವಾರ್ತೆ
ಉಳ್ಳಾಲ,ಜೂ.13: ಗ್ಯಾಂಗ್ರೀನ್(ಅಂಗ ಕೊಳೆತ) ರೋಗದಿಂದಾಗಿ ಕಾಲು ಕಳೆದುಕೊಂಡ ಉಳ್ಳಾಲದ ಸೋಮೇಶ್ವರ ನಿವಾಸಿ ಪುಷ್ಪಕಿರಣ್ ರವರ ಮನೆಗೆ ಉಳ್ಳಾಲ ಜಮಾಅತೆ ಇಸ್ಲಾಮೀ ಹಿಂದ್ ನ ಸಮಾಜ ಸೇವಾ ವಿಭಾಗದ ಸದಸ್ಯರು ದ್ವಿತೀಯ ಬಾರಿಗೆ ಭೇಟಿ ನೀಡಿದರು.
ದಾನಿಗಳಿಂದ ಸಂಗ್ರಹಿಸಿದ 53000 ರೂಪಾಯಿ ಧನಸಹಾಯ ಹಾಗೂ 3000/- ರುಪಾಯಿಯ ರೇಷನ್ ಕಿಟ್ನ್ನು ನೀಡಿ ಸಾಂತ್ವಾನದ ಮಾತಿನ ಮೂಲಕ ಭರವಸೆಯನ್ನು ನೀಡಲಾಯಿತು. ಪುಷ್ಪಕಿರಣ್ ರವರಿಗೆ ಸಹಾಯ ನೀಡಿ ಸಹಕರಿಸಿದ ಎಲ್ಲಾ ದಾನಿಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ಧನ್ಯವಾದ ಸಲ್ಲಿಸಿದೆ.
ಈ ಸಂಧರ್ಭದಲ್ಲಿ ಸಮಾಜ ಸೇವಾ ವಿಭಾಗದ ಸಂಚಾಲಕರಾದ ಜನಾಬ್ ಅಹ್ಮದ್ ಶರೀಫ್, ಝಕೀರ್ ಇಖ್ಲಾಸ್, ಶಂಶುದ್ದೀನ್ ಬಿ.ಕೆ, FITU ನ ಉಳ್ಳಾಲ ಅಧ್ಯಕ್ಷರಾದ ಅಬ್ದುಲ್ ಜಲೀಲ್ ರವರು ಉಪಸ್ಥಿತರಿದ್ದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.