ಮೇ 23ಕ್ಕೆ ನ್ಯಾಯ, ಜನರ ಧ್ವನಿ ವಿಜಯಿಯಾಗಲಿದೆ: ಪ್ರಿಯಾಂಕಾ ಗಾಂಧಿ

0
471

ಹೊಸದಿಲ್ಲಿ,ಮೇ 17: ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ನಿಜವಾದ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಹರಿಸಲು ಯಶಸ್ವಿಯಾಗಲಿಲ್ಲ. ಆದ್ದರಿಂದ ನ್ಯಾಯ ಮತ್ತು ಜನರ ಧ್ವನಿ ಗೆಲ್ಲಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.ಲೋಕಸಭಾ ಚುನಾವಣೆ ಪ್ರಚಾರದ ಕೊನೆಯ ಚರಣ ಮುಗಿದ ನಂತರ ಪ್ರಿಯಾಂಕಾ ಟ್ವೀಟ್ ಮಾಡಿ “ಪ್ರಿಯ ಮಿತ್ರರೆ, 60 ದಿನದಲ್ಲಿ ಒಬ್ಬ ವ್ಯಕ್ತಿ, ಒಂದು ಮತ ಅಥವಾ ಎಲ್ಲರಿಗೂ ರಾಜಕೀಯ ಸಮಾನತೆಯ ಸ್ಫೂರ್ತಿಯುತ ಚುನಾವಣಾ ಪ್ರಚಾರ ಅಭಿಯಾನವನ್ನು ನಡೆಸಲು ನಿಮ್ಮೆಲ್ಲರ ಪ್ರೀತಿಯಿಂದ ಸಾಧ್ಯವಾಯಿತು” ಎಂದು ಹೇಳಿದ್ದಾರೆ.

“ಬಿಜೆಪಿ ಎಲ್ಲ ಪ್ರಯತ್ನ ಮಾಡಿ ನೋಡಿದರೂ ಚುನಾವಣೆಯಲ್ಲಿ ನಿರುದ್ಯೋಗ, ರೈತರು, ದುಡಿಮೆಯಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಹರಿಯದಂತೆ ನೋಡಿಕೊಂಡೆವು. ಆದ್ದರಿಂದ 23 ತಾರೀಕಿಗೆ ನ್ಯಾಯ ಮತ್ತು ಜನರ ಧ್ವನಿ ವಿಜಯಿಯಾಗುವುದು ನಿಶ್ಚಿತವಾಗಿದೆ” ಎಂದು ಪ್ರಿಯಾಂಕಾ ಅಭಿಪ್ರಾಯ ವ್ಯಕ್ತಪಡಿಸಿದರು. ಚುನಾವಣೆಯ ಕೊನೆಯ ಹಂತ ಮೇ 19ಕ್ಕೆ ನಡೆಯಲಿದ್ದು 23 ತಾರೀಕಿಗೆ ಫಲಿತಾಂಶ ಪ್ರಕಟವಾಗಲಿದೆ.