ಸನ್ಮಾರ್ಗ ವಾರ್ತೆ
ಬೆಂಗಳೂರು,ಆ.20: ಮೂರು ವಾರಗಳ ಅನಿಶ್ಚಿತತೆಯ ಬಳಿಕ ಬಿಜೆಪಿ ಸರಕಾರದ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರಿಗೆ ಸಲ್ಲಿಸುವುದರೊಂದಿಗೆ ಮೊದಲ ಹಂತದಲ್ಲಿ 17 ಶಾಸಕರು ಇಂದು ರಾಜ್ಯಪಾಲರಿಂದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
Congratulations to the newly inducted cabinet ministers. Together, let us work towards unveiling a new era of development, growth and prosperity in line with the aspirations of the people of Karnataka and the vision of PM @narendramodi pic.twitter.com/mWxBpNiAdN
— B.S. Yediyurappa (@BSYBJP) August 20, 2019
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. .ಅಶೋಕ್, ಕೆ.ಎಸ್ ಈಶ್ವರಪ್ಪ, ಪಕ್ಷೇತರ ಶಾಸಕ ಎಚ್.ನಾಗೇಶ್, ಜಿ.ಎಂ ಕಾರಜೋಳ, ಡಾ.ಅಶ್ವತ್ಥ ನಾರಾಯಣ್, ಎಲ್.ಎಸ್.ಸವದಿ, ಬಿಶ್ರೀರಾಮುಲು,ಎಸ್.ಸುರೇಶ್ ಕುಮಾರ್, ವಿ.ಸೋಮಣ್ಣ, ಸಿಟಿ ರವಿ, ಬಸವರಾಜ್ ಬೊಮ್ಮಾಯಿ, ಕೋಟ ಶ್ರೀನಿವಾಸ್ ಪೂಜಾರಿ, ಜೆಸಿ ಮಧುಸ್ವಾಮಿ, ಸಿಸಿ ಪಾಟೀಲ್, ಫ್ರಭು ಚೌಹಾನ್, ಜೊಲ್ಲೆ ಶಶಿಕಲಾ ಅರ್ಣಾನ್ಸಾಹೇಬ್ ಪ್ರಮಾಣ ವಚನ ಸ್ವೀಕರಿಸಿದರು.