ವಿಧ್ವಂಸಕಾರಿಗಳೆಂದು ಶಂಕೆ: 25 ಕಾಶ್ಮೀರಿ ಯುವಕರು ಆಗ್ರ ಜೈಲಿಗೆ

0
702

ಶ್ರೀನಗರ, ಆ. 9: ವಿಧ್ವಂಸಕಾರಿಗಳೆಂದು ಆರೋಪಿಸಿ 25 ಕಾಶ್ಮೀರಿಗಳನ್ನು ಶ್ರೀನಗರದಿಂದ ಆಗ್ರಕ್ಕೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ. ಕಲ್ಲೆಸೆಯಲು ಸಾಧ್ಯತೆಯಿರುವವರು ಎಂದು ಹೇಳಿ ಇವರನ್ನು ಆಗ್ರದ ಜೈಲಿನಲ್ಲಿ ಇರಿಸಲಾಗಿದೆ. ಇವರು ಪ್ರತ್ಯೇಕತವಾದಿ ಸಂಘಟನೆಯ ಸಕ್ರಿಯ ಕಾರ್ಯಕರ್ತರೆಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಾಯುಸೇನೆಯ ವಿಶೇಷ ವಿಮಾನದಲ್ಲಿ ಇವರನ್ನು ಕರೆತರಲಾಯಿತು. ಆಗ್ರದ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.