ಕಣ್ಣೂರ್,ಮೇ 3: ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ ಎಪಿ ಅಬ್ದುಲ್ಲಕುಟ್ಟಿಯನ್ನು ಕಾಂಗ್ರೆಸ್ನಿಂದ ಉಚ್ಚಾಟಿಸಲಾಗಿದೆ. ಅಬ್ದುಲ್ಲಕುಟ್ಟಿ ಶೋಕಾಸ್ ನೋಟಿಸಿಗೆ ನೀಡಿದ ಉತ್ತರ ತೃಪ್ತಿಕರವಲ್ಲವೆಂದು ಅವರ ವಿರುದ್ಧ ಕೇರಳ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಕ್ರಮ ಕೈಗೊಂಡಿದೆ. ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ ವಿಷಯಗಳಲ್ಲಿ ದೃಢವಾಗಿದ್ದೇನೆ ಎಂದು ಅಬ್ದುಲ್ಲಕುಟ್ಟಿ ವಿವರಣೆ ನೀಡಿದ್ದರು.
ಕೆಪಿಸಿ ನೋಟಿಸಿಗೆ ಉತ್ತರಿಸಲು ಅವರು ಮೊದಲು ಮುಂದಾಗಿರಲಿಲ್ಲ. ಕೆಪಿಸಿಸಿ ನೋಟಿಸು ಸಿಕ್ಕಿಲ್ಲ ಸಿಕ್ಕಿದರೆ ಉತ್ತರ ನೀಡುವೆ ಎಂದು ಮೊದಲು ಅವರು ಹೇಳಿದ್ದರು. ಇದೇ ವೇಳೆ ತಾನು ತನ್ನ ನಿಲುವಿನಲ್ಲಿ ದೃಢವಾಗಿದ್ದೇನೆ ಎಂದು ಮಾಧ್ಯಮಗಳಲ್ಲಿ ಪುನರುಚ್ಚರಿಸಿದ್ದರು. ನಂತರ ಕಾಂಗ್ರೆಸ್ ನಾಯಕರ ಆಗ್ರಹದಂತೆ ಅಬ್ದುಲ್ಲಕುಟ್ಟಿಯನ್ನು ಕಾಂಗ್ರೆಸ್ ಪಕ್ಷ ವಜಾಗೊಳಿಸಿತು. ಈ ಹಿಂದೆ ಅವರು ಸಿಪಿಎಂನಿಂದ ಹೊರದಬ್ಬಿಸಿಕೊಂಡು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು.