ರಾಹುಲ್ ರಾಜೀನಾಮೆ ಆತ್ಮಹತ್ಯೆ ಸಮಾನ; ಶತ್ರುಗಳಿಗೆ ಆಯುಧ ಕೊಡಬೇಡಿ- ಲಾಲು ಪ್ರಸಾದ್ ಯಾದವ್

0
555

ಹೊಸದಿಲ್ಲಿ,ಮೇ 28: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ಆತ್ಮಹತ್ಯೆ ಸಮಾನ ಎಂದು ಆರ್‍ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಹೇಳಿದರು. ರಾಜೀನಾಮೆ ನೀಡುವ ಮೂಲಕ ಶತ್ರುಗಳಿಗೆ ಆಯುಧ ಕೊಡಬೇಡಿ. ಚುನಾವಣಾ ಫಲಿತಾಂಶದೊಂದಿಗೆ ಎಲ್ಲವೂ ಕೊನೆಗೊಳ್ಳುವುದಿಲ್ಲ ಎಂದು ಲಾಲು ಪ್ರಸಾದ್ ಯಾದವ್ ಹೇಳಿದರು. ಕಾಂಗ್ರೆಸ್ ಅಧ್ಯಕ್ಷರ ರಾಜಿನಾಮೆ ಸಂಘಪರಿವಾರ ವಿರುದ್ಧ ಕ್ರಮದ ಸಾವಿನ ಕರಗಂಟೆ ಆಗಬಹುದು. ಬಿಜೆಪಿ ಒಡ್ಡುವ ಜಾಲದೊಳಗೆ ಬೀಳಬಾರದು ಎಂದು ಲಾಲು ಪ್ರಸಾದ್ ಯಾದವ್ ಆಗ್ರಹಿಸಿದರು. ಕಾಂಗ್ರೆಸ್ ಪಾರ್ಟಿ ಗಾಂಧಿ ಕುಟುಂಬ ಹೊರತಾದ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಆಟದ ಗೊಂಬೆ ಎಂಬ ಟೀಕೆ ಏಳಬಹುದು. ರಾಜಕೀಯ ಪ್ರತಿಸ್ಪರ್ಧಿಗಳಿಗೆ ರಾಹುಲ್ ಇಂಥದ್ದೊಂದು ಅವಕಾಶ ಯಾಕೆ ಕೊಡುತ್ತಿದ್ದಾರೆ ಎಂದು ಲಾಲು ಪ್ರಶ್ನಿಸಿದರು. ಮೋದಿ ಸರಕಾರದ ಗೆಲುವನ್ನು ಪ್ರತಿಪಕ್ಷ ಅಂಗೀಕರಿಸಬೇಕೆಂದೂ ಅವರು ಹೇಳಿದರು.