ಅನ್ಯಾಯ ಕಂಡು ಪ್ರಧಾನಿಗೆ ಪತ್ರ ಬರೆಯಲಾಗಿದೆ; ಸರ್ಕಾರ ನಮ್ಮ ಪತ್ರವನ್ನು ಅರ್ಥಮಾಡಿಕೊಳ್ಳಲಿ- ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್

0
454

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಅ.4: ದೇಶದಲ್ಲಿ ಅನ್ಯಾಯ ಆಗುತ್ತಿರುವುದನ್ನು ಕಂಡು ಪ್ರಧಾನಿಗೆ ಪತ್ರ ಬರೆಯಲಾಗಿದೆ ಎಂದು ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ತಿಳಿಸಿದರು.

ಪತ್ರದಲ್ಲಿ ರಾಜಕೀಯ ಹಿತಾಸಕ್ತಿ ಇರಲಿಲ್ಲ. ತಮ್ಮ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ವಿವರ ಸಿಕ್ಕಿಲ್ಲ. ತಮ್ಮ ಪತ್ರವನ್ನು ಸರಿಯಾದ ರೀತಿಯಲ್ಲಿ ಸರಕಾರ ಅರ್ಥ ಮಾಡಿಕೊಳ್ಳಬೇಕು. ಸರಕಾರದ ನಿಲುವು ದೋಷಕರವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಮುಂದುವರಿಯುತ್ತಿರುವ ಗುಂಪು ಹತ್ಯೆ(ಮೋಬ್ ಲಿಂಚಿಂಗ್) ಧರ್ಮದ ಆಧಾರದ ಅಪರಾಧಗಳನ್ನು ಬೆಟ್ಟು ಮಾಡಿ ಪ್ರಧಾನಿಗೆ ಪತ್ರ ಬರೆದ ಸಿನೆಮಾದ ಪ್ರಮುಖರಲ್ಲಿ ಅಡೂರ್ ಗೋಪಾಲಕೃಷ್ಣನ್ ಸಹಿತ 50 ಮಂದಿಗೂ ಬಿಹಾರದ ಸದರ್ ಪೊಲೀಸರು ಕೋರ್ಟಿನ ಆದೇಶದ ಪ್ರಕಾರದಂತೆ ಕೇಸು ದಾಖಲಿಸಿದ್ದಾರೆ. ಈ ಕ್ರಮಕ್ಕೆ ಅಡೂರ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.