ಮಹಾರಾಷ್ಟ್ರ: ಮೂರು ವರ್ಷಗಳಲ್ಲಿ 12,000 ರೈತರ ಆತ್ಮಹತ್ಯೆ!

0
1226

ಮುಂಬೈ,ಜೂ.22: ಮೂರು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ 12001 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ದತ್ತಾಂಶವನ್ನು ಮಂಡಿಸಲಾಗಿದೆ. 2015ರಿಂದ 2018ರವರೆಗಿನ ವರದಿ ಇದಾಗಿದೆ. ರಾಜ್ಯದ ಸಂತ್ರಸ್ತ ಪರಿಹಾರ ಸಚಿವ ಸುಭಾಶ್ ದೇಶ್‍ಮುಖ್ ಲಿಖಿತ ಆಧಾರಗಳ ಮೂಲಕ ಈ ದಾಖಲೆಯನ್ನು ಮಂಡಿಸಿದ್ದಾರೆ. ಇವರಲ್ಲಿ 6,888 ರೈತರ ಕುಟುಂಬಕ್ಕೆ ರಾಜ್ಯ ಸರಕಾರ ಸಹಾಯಧನ ಪಡೆಯುವ ಅರ್ಹತೆಯಿದೆ ಎಂದು ಪರಿಶೀಲನಾ ಸಮಿತಿ ಕಂಡುಕೊಂಡಿದೆ ಎಂದು ಸಚಿವರು ತಿಳಿಸಿದರು. 6,845 ಕುಟುಂಬಗಳಿಗೆ ಸರಕಾರ ಒಂದು ಲಕ್ಷ ರೂಪಾಯಿ ನೀಡಿದೆ. ಬಿಜೆಪಿ-ಶಿವಸೇನೆ ಸಖ್ಯ ಸರಕಾರ ಮಹಾರಾಷ್ಟ್ರದಲ್ಲಿದೆ.