ದೆಹಲಿಯಲ್ಲಿ ಎರಡು ಕಡೆ ಬೆಂಕಿ ಅನಾಹುತ; ಚಪ್ಪಲಿ ಕಾರ್ಖಾನೆ ಹಾಗೂ 250ರಷ್ಟು ಗುಡಿಸಲುಮನೆಗಳಿಗೆ ಹಾನಿ

0
437

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ.26: ದಿಲ್ಲಿಯಲ್ಲಿ ಎರಡು ಕಡೆ ಭಾರೀ ಬೆಂಕಿ ಅನಾಹುತ ನಡೆದಿದ್ದು ಪಶ್ಚಿಮ ದಿಲ್ಲಿಯ ಕೇಶವಪುರದಲ್ಲಿ ಚಪ್ಪಲಿ ನಿರ್ಮಿಸುವ ಕಾರ್ಖಾನೆ ಮತ್ತು ತುಗ್ಲಕಾಬಾದ್ ಕೊಳಗೇರಿ ಪ್ರದೇಶದಲ್ಲಿ ಘಟನೆ ನಡೆದಿದೆ. ಕೇಶವಪುರದಲ್ಲಿ ಚಪ್ಪಲಿ ಕಾರ್ಖಾನೆಯಲ್ಲಿ ಗಂಟೆಗಳ ಕಾಲ ಪರಿಶ್ರಮದ ಬಳಿಕ ನಿಯಂತ್ರಣಕ್ಕೆ ತರಲಾಯ್ತು.

ತುಗ್ಲಕಾಬಾದಿನಲ್ಲಿ ನಡೆದ ಬೆಂಕಿ ಅವಘಡದಲ್ಲಿ 250ರಷ್ಟು ಗುಡಿಸಲುಮನೆಗಳು ಹಾನಿಗೀಡಾಗಿವೆ. ಆದರೆ ಎರಡೂ ಘಟನೆಗಳಲ್ಲಿ ಜೀವಹಾನಿ ಸಂಭವಿಸಿಲ್ಲ. ಬೆಳಗ್ಗೆ ಒಂದು ಗಂಟೆಗೆ ಘಟನೆಯು ಅರಿವಿಗೆ ಬಂತು ಎಂದು ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ ತಿಳಿಸಿದರು. 28 ಅಗ್ನಿಶಾಮಕ ದಳಗಳು ಬೆಂಕಿಯನ್ನು ನಂದಿಸುವಲ್ಲಿ ಸಫಲವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಗೆ ನಾಶನಷ್ಟ ಸಂಭವಿಸಿದೆ.