ಛತ್ತೀಸ್ಗಡದಲ್ಲಿ ಕಬಡ್ಡಿ ದುರಂತ: ಪಂದ್ಯದ ವೇಳೆ 20 ವರ್ಷದ ಯುವಕ ಮೃತ್ಯು

0
589

ಸನ್ಮಾರ್ಗ ವಾರ್ತೆ

ಅಮೃತಸರ್: ಕಬಡ್ಡಿ ಸ್ಪರ್ಧೆಯಲ್ಲಿ ಪ್ರತಿಸ್ಪರ್ಧಿ ತಂಡದ ಇಬ್ಬರು ಆಟಗಾರರ ಹಿಡಿತಕ್ಕೆ ಸಿಕ್ಕು 20 ವರ್ಷದ ಯುವಕನ ಸಾವು ಸಂಭವಿಸಿದೆ. ಛತ್ತೀಸ್‍ಗಡದ ಧಂತರಿ ಜಿಲ್ಲೆಯ ಗೋಜಿಯಲ್ಲಿ ಪಂದ್ಯದ ವೇಳೆ ಆಟಗಾರ ದಾರುಣವಾಗಿ ಮೃತಪಟ್ಟಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎದುರಾಳಿಗಳ ಕೋರ್ಟಿನಲ್ಲಿ ರೈಡ್ ಮಾಡಿ ಮರಳುವ ವೇಳೆ ಇ ತಂಡದ ಆಟಗಾರರು ನರೇಂದ್ರ ಸಾಹು ಎಂಬ ಯುವಕನ್ನು ಹಿಡಿದರು. ನಂತರ ಇತರರು ಸೇರಿ ಹಿಡಿತ ಬಿಗಿಗೊಳಿಸಿದರು. ಈ ವೇಳೆ ಪ್ರಜ್ಞೆ ಕಳಕೊಂಡು ಬಿದ್ದ ಸಾಹು ಮೃತಪಟ್ಟಿದ್ದಾರೆ.

ಸ್ಥಳದಲ್ಲಿದ್ದ ಸಹ ಆಟಗಾರರು ಮತ್ತು ಗ್ರಾಮ ಮುಖ್ಯಸ್ಥ ಕೂಡಲೇ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಯುವಕ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಹೃದಯಾಘಾತ ಸಾವಿಗೆ ಕಾರಣವೆಂದು ಪ್ರಾಥಮಿಕ ಸೂಚನೆ. ಪೋಸ್ಟ್‌ಮಾರ್ಟಂ ವರದಿ ಬಂದ ಮೇಲೆ ಸಾವಿನ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಸ್ಪರ್ಧಿ ಆಟಗಾರರ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿದೆ.