ಮರ್ಯಾದೆಯಿಂದ ಆ ಶೂ ಕಳಚಿಡಿ: ಯೋಧನ ಮೃತದೇಹ ಸಂಸ್ಕಾರದಲ್ಲಿ ಬಿಜೆಪಿ ಸಚಿವರ ವಿರುದ್ಧ ಬಂಧುಗಳ ಆಕ್ರೋಶ

0
1187

ಪೂಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ವೀರ ಮೃತ್ಯುವಪ್ಪಿದ ಯೋಧನ ಮೃತದೇಹ ಸಂಸ್ಕಾರ ಕಾರ್ಯಕ್ರಮದಲ್ಲಿ ಶೂ ತೆಗೆದಿರಿಸದ ಬಿಜೆಪಿ ಸಚಿವರೊಂದಿಗೆ ಯೋಧನ ಬಂಧುಗಳು ಸಿಡಿಮಿಡಿಗೊಂಡಿದ್ದಾರೆ.

ಸೋಮವಾರ ಪುಲ್ವಾಮದಲ್ಲಿ ಮೃತಪಟ್ಟಿದ್ದ ಯೋಧರಲ್ಲಿ ಒಬ್ಬರಾಧ ಅಜಯ್ ಕುಮಾರ್‍ ರ ಮೃತದೇಹ ಸಂಸ್ಕಾರ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.

ಕೇಂದ್ರ ಸಚಿವ ಸತ್ಯಪಾಲ್ ಸಿಂಗ್, ಉತ್ತರಪ್ರದೇಶ ಸಚಿವ ಸಿದ್ಧಾರ್ಥ ನಾಥ್ ಸಿಂಗ್, ಮೀರತ್ ಬಿಜೆಪಿ ಶಾಸಕ ರಾಜೇಂದ್ರ ಅಗರವಾಲ್ ಶವಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಜಯ್ ಕುಮಾರ್‍ ರ ಭೌತಿಕ ದೇಹ ದಹನದ ವೇಳೆ ಬಿಜೆಪಿ ನಾಯಕರು ಶೂ ಕಳಚಿರಲಿಲ್ಲ. ಇದನ್ನು ಗಮನಿಸಿದ ಬಂಧುಗಳು ಈ ನಾಯಕರ ವಿರುದ್ಧ ಸಿಡಿಮಿಡಿಗೊಂಡರು.

ಎನ್‍ಡಿಟಿವಿಯ ದೃಶ್ಯಾವಳಿ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಿಜೆಪಿ ನಾಯಕರ ವಿರುದ್ಧ ಅಜಯ್‍ಕುಮಾರ್‍ ಬಂಧುಗಳು ಕೋಪಗೊಂಡು ಶೂ ತೆಗೆದಿಡಲು ಹೇಳುವ ದೃಶ್ಯಗಳು ವೀಡಿಯೊದಲ್ಲಿದೆ. ನಾಯಕರು ಕ್ಷಮೆ ಯಾಚಿಸುವುದು ಮತ್ತು ಶೂ ಕಳಚುವುದು ವೀಡಿಯೊದಲ್ಲಿದೆ. ಇನ್ನೊಂದು ವೀಡಿಯೊದಲ್ಲಿ ಅಗರ್‍ವಾಲ್ ಮತ್ತು ಸತ್ಯಪಾಲ್ ಸಿಂಗ್ ಪರಸ್ಪರ ಮಾತಾಡುತ್ತಿದ್ದಾಗ ನಗುತ್ತಿರುವುದು ಕೂಡ ಕಾಣಿಸಿದೆ.