ಚೆನ್ನೈ,ಮೇ 21: ನಟ, ರಾಜಕಾರಿಣಿ ಕಮಲ್ ಹಾಸನ್ರ ನಾಲಿಗೆ ಕತ್ತರಿಸುವ ಬೆದರಿಕೆ ಹಾಕಿದ ತಮಿಳ್ನಾಡು ಸಚಿವ ರಾಜೇಂದ್ರ ಬಾಲಾಜಿ ವಿರುದ್ಧ ಕಾನೂನು ಕ್ರಮಕ್ಕೆ ಮಕ್ಕಳ್ ನೀತಿ ಮಯ್ಯಂ ಮುಂದಾಗಿದೆ. ಗ್ರಾಮಾಭಿವೃದ್ಧಿ ಸಚಿವ ಬಾಲಾಜಿ ವಿರುದ್ಧ ಮಕ್ಕಳ್ ನೀತಿ ಮಯ್ಯಂನ ಉಪಾಧ್ಯಕ್ಷ ಆರ್. ಮಹೇಂದ್ರನ್, ಪ್ರಧಾನ ಕಾರ್ಯದರ್ಶಿ ಅರುಣಾಚಲಂ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಗಾಂಧಿ ಹಂತಕ ನಾಥೂರಾಂ ಗೋಡ್ಸೆಯ ವಿರುದ್ಧ ಕಮಲ್ ಹಾಸನ್ರ ಹೇಳಿಕೆ ಹೊರ ಬಂದಾಗ ಸಚಿವರು ಕಮಲ್ ಹಾಸನ್ರ ನಾಲಿಗೆ ಕತ್ತರಿಸಬೇಕೆಂದು ಹೇಳಿದರು. ಕಮಲ್ ಹಾಸನ್ ಗೋಡ್ಸೆಯನ್ನು ಸ್ವತಂತ್ರ ಭಾರತದ ಪ್ರಥಮ ಹಿಂದೂ ತೀವ್ರವಾದಿ ಎಂದು ಹೆಸರಿಸಿದ್ದರು. ಮೇ 16ರದು ಕುರೂರ್ ಜಿಲ್ಲೆಯಲ್ಲಿ ಸಚಿವರ ಕರೆಯಿಂದ ಪ್ರೇರಿತರಾಗಿ ಕೆಲವರು ಕಮಲ್ ಹಾಸನ್ರ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪ ಹೊರಿಸಲಾಗಿದೆ.