‘ಕಾರವಾನ್’ ಪತ್ರಕರ್ತರ ಮೇಲೆ ಗುಂಪು ಹಲ್ಲೆ

0
414

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.12: ದಿ ಕಾರವಾನ್ ಮ್ಯಾಗಝಿನ್‍ನ ಮೂವರು ಪತ್ರಕರ್ತರ ಮೇಲೆ ದಿಲ್ಲಿಯಲ್ಲಿ ಜನರಿಂದ ಗುಂಪು ಹಲ್ಲೆ ನಡೆದಿದೆ.

ಫ್ರಬ್‍ಜೀತ್ ಸಿಂಗ್, ಶಾಹಿದ್ ತಿವಾರಿ, ಮಹಿಳಾ ಪತ್ರಕರ್ತೆಯ ಮೇಲೆ ಹಲ್ಲೆ ಎಸಗಲಾಗಿದೆ. ಕೋಮು ನಿಂದನೆಯ ಮೂಲಕ ಹಲ್ಲೆ ನಡೆಯಿತೆಂದು ಕಾರವಾನ್ ಮ್ಯಾಗಝೀನ್ ಎಕ್ಸಿಕ್ಯೂಟಿವ್ ಸಂಪಾದಕ ವಿನೋದ್.ಕೆ.ಜೋಸ್ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

ಮಹಿಳಾ ಪತ್ರಕರ್ತರ ಮೇಲೆ ಜನರು ಅಸಭ್ಯ ಭಾಷೆಯಲ್ಲಿ ಮಾತಾಡಿದ್ದಾರೆ. ನಗ್ನತೆಯನ್ನು ಪ್ರದರ್ಶಿಸಿದ್ದಾರೆ. ದೂರು ನೀಡಿದರೂ ಈವರೆಗೆ ಎಫ್‍ಐಆರ್ ದಾಖಲಿಸಲಾಗಿಲ್ಲ ಎಂದು ವಿನೋದ್ ಕೆ. ಜೋಸ್ ಹೇಳಿದ್ದಾರೆ.

ದಿಲ್ಲಿ ಗಲಭೆಯಲ್ಲಿ ಸಂಘಪರಿವಾರದ ಪಾತ್ರವನ್ನು ಹೊರತರುವುದರಲ್ಲಿ ಕಾರವಾನ್ ಮ್ಯಾಗಝಿನ್ ನಿರ್ಣಾಯಕ ಪಾತ್ರವಹಿಸಿತ್ತು. ಇದರ ಕೋಪ ಹಲ್ಲೆಗೆ ಕಾರಣ ಎನ್ನಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.