ಮೋದಿ ಸರಕಾರ ನಿಮ್ಮ ಹಣವನ್ನು ಶ್ರೀಮಂತರ ಜೇಬಿಗೆ ತುಂಬಿತು- ರಾಹುಲ್ ಗಾಂಧಿ

0
448

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.23: ಪ್ರಧಾನಿ ನರೇಂದ್ರ ಮೋದಿ ಸರಕಾರ ನಿಮ್ಮ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಶ್ರೀಮಂತರ ಜೇಬಿಗೆ ತುಂಬಿದೆ. ಕಪ್ಪು ಹಣದ ವಿರುದ್ಧ ಹೋರಾಡಲು ಅವರು ಕರೆ ನೀಡಿದರು. ಆದರೆ ನೋಟು ನಿಷೇಧದ ಮೂಲಕ ಬ್ಯಾಂಕುಗಳ ಮುಂದಿದ್ದ ಕ್ಯೂವಿನಲ್ಲಿ ನೀವು ಅದಾನಿಯನ್ನು ನೋಡಿದ್ದೀರಾ? ಅವರು ಎಸಿ ಕೋಣೆಯಲ್ಲಿ ಆರಾಮವಾಗಿದ್ದರು ಎಂದು ರಾಹುಲ್ ಗಾಂಧಿ ಬಿಹಾರದ ಚುನವಣಾ ಪ್ರಚಾರದಲ್ಲಿ ಹೇಳಿದರು.

ಶ್ರೀಮಂತರಿಗೆ ಮಾರ್ಗದರ್ಶನವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಇದಕ್ಕಾಗಿ ರೈತರು, ಸಣ್ಣ ವ್ಯಾಪಾರಿಗಳನ್ನು ವಂಚಿಸುತ್ತಿದ್ದಾರೆ. ಇದಕ್ಕೆ ಅತ್ಯಂತ ದೊಡ್ಡ ಸಾಕ್ಷಿ ಜನವಿರೋಧಿ ರೈತ ಮಸೂದೆಗಳೆಂದು ರಾಹುಲ್ ಗಾಂಧಿ ತಿಳಿಸಿದರು.

ಗಲ್ವಾನ್‍ನಲ್ಲಿ 20 ಸೈನಿಕರು ವೀರ ಮೃತ್ಯು ಅಪ್ಪಿದರು. ಭಾರತದ 1,200 ಕಿಲೋಮೀಟರ್ ಪ್ರದೇಶವನ್ನು ಚೀನ ವಶಪಡಿಸಿಕೊಂಡಿತು. ಆದರೂ ಯಾರೂ ಭಾರತದ ಭೂಪ್ರದೇಶಕ್ಕೆ ಬಂದಿಲ್ಲ ಎಂದರು. ಮೋದಿಯ ಈ ಹೇಳಿಕೆ ದೇಶವನ್ನು ಅಪಮಾನಿಸುವುದಕ್ಕೆ ಸಮಾನವಾಗಿದೆ. ಬಿಹಾರದ ಕಾರ್ಮಿಕರು ಲಾಕ್‍ಡೌನ್ ಕಾಲದಲ್ಲಿ ವಲಸೆ ಬಂದಾಗ ಅವರ ನೆರವಿಗೆ ಕೇಂದ್ರ ಸರಕಾರ ಬಂದಿಲ್ಲ ಎಂದು ರಾಹುಲ್ ಆರೋಪಿಸಿದರು.