ನೀವು ನನ್ನನ್ನು ಜೈಲಿಗೆ ತಳ್ಳಿದರೆ ನಾನು ಅಲ್ಲಾಹನ ಸಂದೇಶವನ್ನು ಹರಡುವೆನು… ಜಾಕಿರ್ ನಾಯ್ಕ್

0
1878

ನೀವು ನನ್ನನ್ನು ಜೈಲಿಗೆ ತಳ್ಳಿದರೆ ನಾನು ಅಲ್ಲಾಹನ ಸಂದೇಶವನ್ನು ಹರಡುವೆನು. ನೀವು ನನ್ನನ್ನು ದೇಶಭ್ರಷ್ಟಗೊಳಿಸಿದರೆ ಅಲ್ಲಾಹನ ಸೃಷ್ಟಿಯ ಸೌ೦ದರ್ಯವನ್ನು ಧ್ಯಾನಿಸುವೆನು. ನೀವು ನನ್ನನ್ನು ಗಲ್ಲಿಗೇರಿಸಿದರೆ ಹುತಾತ್ಮನಾಗುವೆನು ಎಂದು ಜಾಕಿರ್ ನಾಯ್ಕ್ ಹೇಳಿದ್ದಾರೆ. ದಶಂಬರ್ ಐದರಂದು ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡಲಾದ ಅಭಿಪ್ರಾಯದಲ್ಲಿ ಅವರು ಹೀಗೆ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ನಾನು ಭಾರತದ ಸಂವಿಧಾನವನ್ನು ಇಷ್ಟಪಡುತ್ತೇನೆ. ಅದು ಧರ್ಮವನ್ನು ಆಚರಿಸುವ, ಪ್ರಚಾರಮಾಡುವ ಹಕ್ಕನ್ನು ಪ್ರತಿಯೊಬ್ಬನಿಗೂ ನೀಡುತ್ತದೆ. ನಾನು ಭಾರತದ ಒಂದೇ ಒಂದು ಕಾನೂನನ್ನೂ ಉಲ್ಲಂಘಿಸಿಲ್ಲ. ನಾನು ಶಾಂತಿಯನ್ನು ಪ್ರಸಾರ ಮಾಡುತ್ತಿದ್ದೆ. ಆದರೆ, ಶಾಂತಿಯನ್ನು ಬಯಸದವರು ಅವರು ನನ್ನನ್ನು ತಡೆದರು ಎಂದವರು ಹೇಳಿದ್ದಾರೆ.