ರೈತರ ಸತ್ಯಾಗ್ರಹ ರಾಷ್ಟ್ರದ ಹಿತಾಸಕ್ತಿಯನ್ನು ಹೊಂದಿದೆ: ರಾಹುಲ್ ಗಾಂಧಿ

0
360

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅನ್ನದಾತರ ಶಾಂತಿಪೂರ್ಣ ಸತ್ಯಾಗ್ರಹ ರಾಷ್ಟ್ರದ ಹಿತಾಸಕ್ತಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಡೀ ದೇಶದಲ್ಲಿ ರಸ್ತೆ ತಡೆ ಹೊರಾಟ ಘೋಷಣೆಯ ನಂತರ ರಾಹುಲ್ ಗಾಂಧಿ ಹೇಳಿದ್ದಾರೆ.

ಅನ್ನದಾತರ ಶಾಂತಿಯುತ ಹೋರಾಟ ರಾಷ್ಟ್ರ ಹಿತವನ್ನು ಆಧರಿಸಿದೆ. ಈ ಮೂರು ಕಾನೂನುಗಳು ರೈತರಿಗೆ ಮಾತ್ರವಲ್ಲ ದೇಶದ ಎಲ್ಲ ಜನರಿಗೆ ಹಾನಿಕರವಾಗಿದೆ. ಆದ್ದರಿಂದ ಸಂಪೂರ್ಣ ಬೆಂಬಲವಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರೈತರು ಕರೆ ನೀಡಿದ ರಸ್ತೆ ತಡೆ ಮುಂದುವರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ರಾಜ್ಯದ ಹೆದ್ದಾರಿಯನ್ನು ರೈತರು ಮುತ್ತಿಗೆ ಹಾಕುತ್ತಿದ್ದಾರೆ. ರಸ್ತೆ ತಡೆಯ ಮುಂಚಿತವಾಗಿ ಹಲವಾರು ರೈತ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೃಹತ್ ಪೊಲೀಸ್ ಸಿದ್ಧತೆಯನ್ನು ದಿಲ್ಲಿಯಲ್ಲಿ ಮಾಡಲಾಗಿದೆ. ಕೆಂಪು ಕೋಟೆ ಸಹಿತ ರಾಜಧಾನಿಯ ಪ್ರಧಾನ ಸ್ಥಳಗಳಲ್ಲಿ ಸುರಕ್ಷೆಯನ್ನು ಹೆಚ್ಚಿಸಲಾಗಿದೆ.