ಪ್ರಜ್ಞಾ ಸಿಂಗ್ ಭಯೋತ್ಪಾದಕಿ -ಸಿದ್ದರಾಮಯ್ಯ

0
486

ಹುಬ್ಬಳ್ಳಿ,ಮೇ 18: ಬಿಜೆಪಿಯ ಭೋಪಾಲ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಭಯೋತ್ಪಾದಕಿ ಎಂದು ಕಾಂಗ್ರೆಸ್ ನಾಯಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗಾಂಧೀಜಿಗೆ ‘ಮಹಾತ್ಮ’ ಎಂಬ ಪದವಿಯನ್ನು ದೇಶದ ಜನರು ನೀಡಿದ್ದಾರೆ. ಆದರೆ ಗಾಂಧಿ ಹಂತಕ ಗೋಡ್ಸೆಗೆ ಯಾರೂ ಇಂತಹ ಸ್ಥಾನ ನೀಡಿಲ್ಲ. ಹತ್ಯೆಯಾದ ಹಲವು ಮಹಾತ್ಮರನ್ನು ದೇಶಪ್ರೇಮಿಗಳೆಂದು ಕರೆಯುತ್ತೇವೆ. ಆದರೆ ಎಲ್ಲ ಭಯೋತ್ಪಾದಕರನ್ನು ದೇಶಪ್ರೇಮಿಗಳೆಂದು ಈಗ ಕರೆಯಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಜ್ಞಾ ಸಿಂಗ್ ಠಾಕೂರ್ ಶೇ. 100ರಷ್ಟು ಆರೆಸ್ಸೆಸ್ ಆಗಿದ್ದಾರೆ. ಭಯೋತ್ಪಾದಕಿಯೂ ಆಗಿದ್ದಾರೆ. ಮಹಿಳೆಯೆನ್ನುವ ಪರಿಗಣನೆ ಯಾಕೆ ನೀಡಬೇಕೆಂದು ಸಿದ್ದರಾಮಯ್ಯ ಕೇಳಿದರು. ಇಂತಹ ಹಲವಾರು ಮಂದಿ ಬಿಜೆಪಿಯಲ್ಲಿದ್ದಾರೆ. ಕೇಂದ್ರ ಸಚಿವ ಅನಂತ್‍ಕುಮಾರ್ ಸಂವಿಧಾನ ತಿದ್ದಬೇಕೆಂದು ಹೇಳಿದ್ದಾರೆ.

ಹೇಗೆ ದೇಶ ಸ್ವಾತಂತ್ರ್ಯ ಗಳಿಸಿತು. ಭಾರತದ ಮಹತ್ವ ಏನು. ಯಾಕಾಗಿ ನಾವು ದೇಶಪ್ರೇಮಿ ಎಂದು ಕರೆಯುತ್ತೇವೆ. ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್‍ಗೆ ಭಾರತದ ಇತಿಹಾಸ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.