ರೈತರಿಗೆ ಕೃಷಿ ಕಾನೂನುಗಳ ಅಪಾಯ ಅರಿವಿಗೆ ಬಂದರೆ ದೇಶಾದ್ಯಂತ ಪ್ರತಿಭಟನೆ ನಡೆಯುವುದು: ರಾಹುಲ್ ಗಾಂಧಿ

0
424

ಸನ್ಮಾರ್ಗ ವಾರ್ತೆ

ಕೇರಳ: ಕೃಷಿ ಕಾನೂನಿನ ಜನದ್ರೋಹ ಮತ್ತು ಅಪಾಯವನ್ನು ದೇಶದ ರೈತರೆಲ್ಲರೂ ಅರ್ಥ ಮಾಡಿಕೊಂಡಿಲ್ಲ. ಇವುಗಳ ಅಪಾಯ ಅರಿವಿಗೆ ಬಂದರೆ ಇಡೀ ದೇಶದಲ್ಲಿ ಪ್ರತಿಭಟನೆ ಎದ್ದು ಬರಬಹುದು ಎಂದು ರಾಹುಲ್ ಗಾಂಧಿ ಹೇಳಿದರು.

ಎರಡೋ ಮೂರೋ ಕಾರ್ಪೊರೇಟ್ ಕಂಪೆನಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ರೈತರನ್ನು ಕೊಳ್ಳೆ ಹೊಡೆಯಲು ನೆರವು ನೀಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. ಅವರು ಕೇರಳದ ಕಲ್ಪಟ್ಟ ಚಂದ್ರಗಿರಿ ಅಡಿಟೋರಿಯಂನಲ್ಲಿ ನಡೆದ ಯುಡಿಎಫ್ ಸಮಾವೇಶವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ರಾಹುಲ್ ಗಾಂಧಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇರಳಕ್ಕೆ ಆಗಮಿಸಿದ್ದು, ಮಧ್ಯಾಹ್ನ ಎರಡು ಗಂಟೆಗೆ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ರೈತರಿಗೆ ಸುಗಂಧ ವ್ಯಂಜನ ಕಿಟ್ ವಿತರಿಸಲಿದ್ದಾರೆ.