ಶ್ರೀನಗರದಲ್ಲಿ ಮೂವರ ಎನ್‍ಕೌಂಟರ್: ಕೊಲ್ಲಲ್ಪಟ್ಟವರು ವಿದ್ಯಾರ್ಥಿಗಳು ಎಂದ ಕುಟುಂಬ

0
624

ಸನ್ಮಾರ್ಗ ವಾರ್ತೆ

ಶ್ರೀನಗರ,ಡಿ.31: ಜಮ್ಮು ಕಾಶ್ಮೀರದ ಶ್ರೀನಗರದ ಪಾರಿಂಪೊರ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಮೂವರು ಭಯೋತ್ಪಾದಕರ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಂಗಳವಾರ ಸಂಜೆ ಭಯೋತ್ಪಾದಕರು ಮತ್ತು ಸುರಕ್ಷಾ ಸೇನೆಯ ಮೇಲೆ ಗುಂಡು ಹಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರೆಯಿಡೀ ಎರಡು ಕಡೆಯಿಂದ ಗುಂಡು ಹಾರಾಟ ನಡೆದಿತ್ತು ಎಂದು ಪೊಲೀಸರು ಹೇಳಿದರು.

ಇದೇ ವೇಳೇ, ಕೊಲ್ಲಲ್ಪಟ್ಟವರು ಭಯೋತ್ಪಾದಕರಲ್ಲ ನಿರಪರಾಧಿಗಳು ಎಂದು ಶ್ರೀನಗರದಲ್ಲಿ ಕುಟುಂಬ ಪ್ರತಿಭಟನೆ ನಡೆಸಿದ್ದಾರೆ. ಕೊಲ್ಲಲ್ಪಟ್ಟ ಮೂವರು ವಿದ್ಯಾರ್ಥಿಗಳು ಕಾಶ್ಮೀರ ವಿಶ್ವ ವಿದ್ಯಾನಿಲಯದಲ್ಲಿ ಅರ್ಜಿ ಸಲ್ಲಿಸಲು ತೆರಳಿದ್ದ ವಿದ್ಯಾರ್ಥಿಗಳು ಎಂದು ಕುಟುಂಬ ಹೇಳಿದೆ.