ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆಗಸ್ಟ್ 4ರಂದು ಮಂಗಳೂರಿಗೆ

0
643

ಮಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀಮಾನ್ ತಾಹೀರ್ ಹುಸೇನ್ ರವರು, ಆಗಸ್ಟ್ 3ರ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಆಯಾ ಜಿಲ್ಲೆಯಲ್ಲಿ ಪಕ್ಷದ ಹೊಣೆಗಾರರೊಂದಿಗೆ, ಸದಸ್ಯರೊಂದಿಗೆ ಸಭೆ ನಡೆಸಿ ಪಕ್ಷದ ಬೆಳವಣಿಗೆ, ಕಾರ್ಯ ಚಟುವಟಿಕೆಗಳ‌ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಆ ಪ್ರಯುಕ್ತ ಆಗಸ್ಟ್ 3ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿರುವ ಅಧ್ಯಕ್ಷರು, ಅಂದು ಸಂಜೆ ದ ಕ ಜಿಲ್ಲೆಯ ಪುತ್ತೂರಿಗೆ ಬಂದು, ಹೊಸದಾಗಿ ರಚನೆಯಾದ ಪುತ್ತೂರು ವಲಯ ಸಮಿತಿಗೆ ನಿರ್ದೇಶನ ನೀಡಲಿದ್ದಾರೆ.

ಆಗಸ್ಟ್ 4ರಂದು ದ.ಕ.ಕ್ಕೆ ಆಗಮಿಸಲಿರುವ ರಾಜ್ಯಾಧ್ಯಕ್ಷರೊಂದಿಗೆ, ರಾಜ್ಯ ಪ್ರಧಾನ‌ ಕಾರ್ಯದರ್ಶಿ ಶ್ರೀಮಾನ್ ಹಬೀಬುಲ್ಲಾ ಖಾನ್ ಕೂಡಾ ಇರಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ, ಸ್ಟೇಟ್ ಬ್ಯಾಂಕ್ ಬಳಿಯ ಹ್ಯಾಮಿಲ್ಟನ್ ಕಾಂಪ್ಲೆಕ್ಸಿನಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ “ಪ್ರಸಕ್ತ ರಾಜಕೀಯ ಸನ್ನಿವೇಶ”ದ ಕುರಿತು ಮಾಧ್ಯಮದೊಂದಿಗೆ ಸುದ್ಧಿಗೋಷ್ಠಿ ನಡೆಸಲಿದ್ದಾರೆ. ತದ ನಂತರ, ಪಕ್ಷದ ಜಿಲ್ಲಾ ನಾಯಕರ, ಸದಸ್ಯರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಭೆಯ ಬಳಿಕ ಉಡುಪಿ ಜಿಲ್ಲೆಗೆ ತಮ್ಮ‌ ಪ್ರವಾಸವನ್ನು ಮುಂದುವರಿಸಲಿದ್ದಾರೆ ಎಂದು ಪಕ್ಷದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.