ಜಮಾಅತೆ ಇಸ್ಲಾಮಿ ಮಲ್ಪೆ ವತಿಯಿಂದ ಈದ್ ಸೌಹಾರ್ದ ಕೂಟ

0
426

ಸನ್ಮಾರ್ಗ ವಾರ್ತೆ

ಹಬ್ಬಗಳನ್ನು ಪರಸ್ಪರರು ಒಂದುಗೂಡಿ ಆಚರಿಸಬೇಕು ಆಗ ಸದೃಢ ಶಾಂತಿಯುತ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯ ಎಂದು ಸಂತ ಅನ್ನಮ್ಮ ಚರ್ಚ್ ಇದರ ಧರ್ಮ ಗುರು ಆಗಿರುವ ಡೇನಿಸ್ ಡೇಸ ಅವರು ಅಭಿಪ್ರಾಯ ಪಟ್ಟರು.

ಅವರು ಜಮಾಅತೆ ಇಸ್ಲಾಮಿ ಮಲ್ಪೆ ಶಾಖೆ ವತಿಯಿಂದ ಆಯೋಜಿಸಿದ ಈದ್ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಸರ್ವಧರ್ಮ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ರಮೇಶ್ ತಿಂಗಳಾಯ ರವರು ಮಾತಾಡುತ್ತಾ ನಮ್ಮ ಹಿರಿಯರು ಒಟ್ಟುಗೂಡಿ ಕಟ್ಟಿದಂತಹ ಸರ್ವಧರ್ಮ ಸಮಾಜ ಮುಂದಿನ ಪೀಳಿಗೆಗೂ ತಿಳಿಯಪಡಿಸುವ ಅವಶ್ಯಕತೆ ಇದೆ ಮತ್ತು ಆ ಕಾರ್ಯ ನಮ್ಮ ಮನೆಯಿಂದಲೇ ನಡೆಯಲಿ ಎಂದು ಹೇಳಿದರು.

ಮೌಲಾನಾ ಇಮ್ರಾನುಲ್ಲಾ ಖಾನ್ ರವರು ನಾವೆಲ್ಲರೂ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಬೇಕೆ ಹೊರತು ಧಾರ್ಮಿಕವಾದ ಅಲ್ಲ ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಸ್ತಾವಿಕ ಮತ್ತು ನಿರೂಪಣೆ ಜಿ ಶುಐಬ್ ಮಲ್ಪೆ ನಿರ್ವಹಿಸಿದರು, ಆರಂಭದಲ್ಲಿ ಅಯಾನ್ ಶೇಕ್ ಮಲ್ಪೆ ಕುರ್’ಆನ್ ಪಠಣ ಮಾಡಿದರು. ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here