ಮೆಟ್ರೋದಲ್ಲಿ ಜೈ ಶ್ರೀ ರಾಮ್: ಕಿಡಿ ಕಾರಿದ ನಟಿ ಮತ್ತು ನಿರ್ದೇಶಕಿ ಪೂಜಾ ಭಟ್

0
344

ಸನ್ಮಾರ್ಗ ವಾರ್ತೆ

ಮೆಟ್ರೋ ಪ್ರಯಾಣಿಕರು ಗಾರ್ಭ ಹಾಡು ಹಾಡುವುದು ಮತ್ತು ಜೈ ಶ್ರೀರಾಮ್ ಎಂದು ಘೋಷಿಸುವುದರ ವಿರುದ್ಧ ನಟಿ ಮತ್ತು ನಿರ್ದೇಶಕಿ ಪೂಜಾ ಭಟ್ ಕಿಡಿಕಾರಿದ್ದಾರೆ. ನವರಾತ್ರಿ ಸಂಭ್ರಮದ ನಡುವೆ ಮುಂಬೈ ಮೆಟ್ರೋದಲ್ಲಿ ಗುಜರಾತಿನ ಒಂದು ಗುಂಪು ಗಾರ್ಭ ಹಾಡನ್ನು ಹಾಡಿರುವುದು ಮತ್ತು ಜೈ ಶ್ರೀರಾಮ್ ಎಂದು ಘೋಷಿಸಿರುವುದರ ವಿಡಿಯೋ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವರ್ತನೆ ಸರಿಯೇ? ಇಂತವುಗಳಿಗೆ ಅನುಮತಿ ಇದೆಯೇ? ಅದು ಹಿಂದುತ್ವ ಪಾಪ್ ಸಂಗೀತವಾಗಿರಲಿ, ಕ್ರೈಸ್ತರ ಹಾಡುಗಳಾಗಿರಲಿ ಅಥವಾ ಬಾಲಿವುಡ್ ನ ಹಾಡುಗಳಾಗಿರಲಿ ಅಥವಾ ಇನ್ಯಾವುದಾದರೂ ಆಗಿರಲಿ, ಸಾರ್ವಜನಿಕ ಸ್ಥಳಗಳಲ್ಲಿ ಅವನ್ನು ಈ ರೀತಿಯಲ್ಲಿ ಪ್ರದರ್ಶಿಸುವುದು ಸರಿಯಲ್ಲ ಎಂದು ಪೂಜಾ ಭಟ್ ಹೇಳಿದ್ದಾರೆ.

ಜನರು ನಾಗರಿಕ ನಿಯಮಗಳನ್ನು ಪಾಲಿಸದಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಅಶಾಂತಿ ಉಂಟಾಗುತ್ತದೆ. ನಮ್ಮ ನಗರಗಳನ್ನು ರಾಜಕೀಯ ಪಕ್ಷಗಳ ಅನಧಿಕೃತ ಬ್ಯಾನರ್ಗಳು ಹಾಳು ಮಾಡುತ್ತಿವೆ, ಮೆಟ್ರೋ ಹಾಡಿನ ಗದ್ದಲದಲ್ಲಿ ಮುಳುಗಿ ಹೋಗುತ್ತಿವೆ, ರಸ್ತೆಯಲ್ಲಿ ಫೋಟೋಗಳನ್ನು ಹೊತ್ತಿಸಲಾಗುತ್ತದೆ. ಈ ಎಲ್ಲವನ್ನು ಅಕ್ರಮಿಗಳು ಅಕ್ರಮಿಸಿ ಹಾಳು ಮಾಡುತ್ತಿದ್ದಾರೆ ಎಂದವರು ಹೇಳಿದ್ದಾರೆ.