22 ಸೀಟು ಗೆಲ್ಲುತ್ತೇವೆಂದ ಯಡಿಯೂರಪ್ಪಗೆ ಬಿಜೆಪಿಯಿಂದಲೇ ಮಂಗಳಾರತಿ

0
513

ಬೆಂಗಳೂರು,ಮಾ.1: ಬಾಲಕೋಟ್ ದಾಳಿಯೊಂದಿಗೆ ಕರ್ನಾಟಕದಲ್ಲಿ ಬಿಜೆಪಿಗೆ 22ಕ್ಕೂ ಹೆಚ್ಚು ಲೋಕಸಭಾ ಸೀಟುಗಳು ಸಿಗಬಹುದು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಯೆಡಿಯೂರಪ್ಪರ ಹೇಳಿಕೆಯ ವಿರುದ್ಧ ಪಾರ್ಟಿಯೊಳಗೆ ಟೀಕೆ ವ್ಯಕ್ತವಾಗಿದೆ.

ಯೆಡಿಯೂರಪ್ಪರ ಹೇಳಿಕೆಯನ್ನು ಪಾಕಿಸ್ತಾನದ ಮಾಧ್ಯಮಗಳು ಕೂಡ ಪ್ರಸಾರ ಮಾಡಿದ್ದವು. ಭಾರತ ಚುನಾವಣೆ ಲಾಭವೆತ್ತಲು ದಾಳಿ ಮಾಡುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ಪ್ರಚಾರ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ವಿ.ಕೆ. ಸಿಂಗ್ ಯಡಿಯೂರಪ್ಪರನ್ನು ಕಟುವಾಗಿ ಟೀಕಿಸಿದ್ದಾರೆ.

ಯೆಡಿಯೂರಪ್ಪ ತನ್ನ ಹೇಳಿಕೆ ತಿದ್ದಿಕೊಳ್ಳಲಿ ಎಂದು ಆಗ್ರಹಿಸುತ್ತೇನೆ ನಾವು ಒಂದು ರಾಷ್ಟ್ರವಾಗಿ ನಿಲ್ಲಬೇಕಾಗಿದೆ. ದೇಶದ ಪ್ರಜೆಗಳ ಸುರಕ್ಷೆಯನ್ನು ಪರಿಗಣಿಸಿ ದಾಳಿ ನಡೆಸಲಾಗಿದೆ. ಅಲ್ಲದೆ ಯಾವುದೋ ಸೀಟು ಗೆಲ್ಲುವುದಕ್ಕಾಗಿ ಮಾಡಿದ ದಾಳಿಯಲ್ಲ ಎಂದು ಸಿಂಗ್ ನಿನ್ನೆ ಟ್ವೀಟ್ ಮಾಡಿದ್ದರು.

ಬಿಜೆಪಿಗೆ ಅನುಕೂಲಕರವಾದ ವಾತಾವರಣ ದೇಶದಲ್ಲಿದೆ ಎಂದು ಹೇಳಿದ ಬಳಿಕ ಬಾಲಕೋಟ್ ಭಯೋತ್ಪಾದಕರ ಕೇಂದ್ರಗಳಲ್ಲಿ ಭಾರತದ ವಾಯುಸೇನೆ ದಾಳಿ ನಡೆಸಿದ್ದರಿಂದ ಬಿಜೆಪಿ ಭಾರೀ ಜಯಗಳಿಸಲಿದೆ ಎಂದು ಯೆಡಿಯೂರಪ್ಪ ಹೇಳಿದ್ದರು.